2006ರ ವಾರಣಾಸಿ ಸಂಕಟ ಮೋಚನ ಮಂದಿರ ಮತ್ತು ರೈಲ್ವೇ ಛಾವಣಿ ಸರಣಿ ಸ್ಫೋಟ ಪ್ರಕರಣದ ಆರೋಪಿಗೆ ಮರಣದಂಡನೆ ಶಿಕ್ಷೆ

ಉತ್ತರ ಪ್ರದೇಶ: 2006ರ ವಾರಣಾಸಿ ಸರಣಿ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ಭಯೋತ್ಪಾದಕ ವಲಿಯುಲ್ಲಾಗೆ ಗಾಜಿಯಾಬಾದ್ ನ್ಯಾಯಾಲಯವು ಶನಿವಾರ ಮರಣದಂಡನೆ ವಿಧಿಸಿದೆ. ಮಾರ್ಚ್ 7, 2006 ರಂದು, ಉತ್ತರ ಪ್ರದೇಶದ ವಾರಣಾಸಿಯ ಸಂಕಟ ಮೋಚನ ದೇವಸ್ಥಾನ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಸರಣಿ ಸ್ಫೋಟಗಳು ಸಂಭವಿಸಿ ಕನಿಷ್ಠ 20 ಜನರನ್ನು ಬಲಿಯಾಗಿದ್ದರು ಮತ್ತು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅದೇ ದಿನ ಸಂಜೆ ದಶಾಶ್ವಮೇಧ ಘಾಟ್‌ನಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದವು. ಘಟನೆ ನಡೆದ ತಿಂಗಳ ಬಳಿಕ, ವಾರಣಾಸಿ ಪೊಲೀಸರು […]