ಮಕ್ಕಳು ಸೇರಿದಂತೆ 14 ದಲಿತರನ್ನು ಬಂಧನದಲ್ಲಿಟ್ಟ ಕಾಫಿ ಎಸ್ಟೇಟ್ ಮಾಲೀಕರ ವಿರುದ್ದ ಪ್ರಕರಣ ದಾಖಲು

ಚಿಕ್ಕಮಗಳೂರು: ಇಲ್ಲಿನ ಹುಸನೇಹಳ್ಳಿಯಲ್ಲಿ ಕಾಫಿ ಎಸ್ಟೇಟ್ ಮಾಲೀಕರೊಬ್ಬರು ಹಣಕಾಸಿನ ವಿಚಾರದಲ್ಲಿ 14 ದಲಿತರನ್ನು ಥಳಿಸಿ ಒಂದು ದಿನದ ಮಟ್ಟಿಗೆ ಅವರೆಲ್ಲರನ್ನು ಬಂಧಿಸಿಟ್ಟಿದ ವಿಚಾರದಲ್ಲಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಕಾಫಿ ಎಸ್ಟೇಟ್ ಮಾಲೀಕ ಜಗದೀಶಗೌಡ ಮತ್ತು ಅವರ ಪುತ್ರ ತಿಲಕ್ ವಿರುದ್ಧ ಪೊಲೀಸರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳು ಮತ್ತು ಎಸ್‌ಸಿ-ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಗಾಯಗೊಂಡಿರುವ ಮಹಿಳೆಯೊಬ್ಬರು, ಸಂತ್ರಸ್ತರನ್ನು ಹೊಡೆಯುವ […]