ಪರವಾನಗಿ ಇಲ್ಲದೇ ಬೀಟೆ ಮರದ ದಿಮ್ಮಿಗಳ ಅಕ್ರಮ ಸಾಗಾಟ: ಆರೋಪಿಗೆ ಶಿಕ್ಷೆ

ಉಡುಪಿ, ಜುಲೈ 4: ಆರೋಪಿತನಾದ ಸುರೇಶ್ ಹೆಚ್ ಇವರು ಜನವರಿ 6, 2012 ರಂದು ಬೆಳಗ್ಗೆ 8-30 ಗಂಟೆ ಸಮಯಕ್ಕೆ ಕುಂದಾಪುರ ತಾಲೂಕು ಬೆಳ್ಳಾಲ ಗ್ರಾಮದ ದೊಡ್ಡಕುಂದ ಸರಕಾರಿ ಮುಡಗಲ್ ಮೀಸಲು ಅರಣ್ಯ ಪ್ರದೇಶದಿಂದ ಸುಮಾರು 25,000 ರೂ. ಬೆಲೆಬಾಳುವ 7 ಬೀಟೆ ಮರದ ದಿಮ್ಮಿಗಳನ್ನು ಕಳವು ಮಾಡಿ ಕೆಎ-20-ಎನ್-2588 ನೇ ಇನ್ನೋವಾ ಕಾರಿನಲ್ಲಿ ಪರವಾನಿಗೆ ಇಲ್ಲದೆ ಸಾಗಾಟ ಮಾಡುತ್ತಿದ್ದಾಗ ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದ ಬಳಿ ವಾಹನವನ್ನು ತಡೆದು ಆರೋಪಿತನನ್ನು ದಸ್ತಗಿರಿ ಮಾಡಿ ವಾಹನ ಹಾಗೂ […]