ಬೈಲೂರು: ಕಾಡುಬಿಟ್ಟು ಮನೆಯಂಗಳಕ್ಕೆ ಬಂದ ಕಾಡುಕೋಣ; ಗ್ರಾಮಸ್ಥರಲ್ಲಿ ಆತಂಕ

ಬೈಲೂರು: ಕಾರ್ಕಳ ತಾಲೂಕಿನ ನೀರೆ ಗ್ರಾಮದಲ್ಲಿ ಕಾಡುಕೋಣವೊಂದು ಮನೆಯಂಗಳಕ್ಕೆ ನುಗ್ಗಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಕಾಡಿನಿಂದ ಏಕಾಏಕಿಯಾಗಿ ಮನೆಯಂಗಳಕ್ಕೆ ಕಾಡುಕೋಣ ಬಂದಿದ್ದು, ಇದರಿಂದ ಮನೆಯವರು ಆತಂಕಕ್ಕೊಳಗಾದರು. ಬಳಿಕ ಮನೆಮಂದಿ ಸೇರಿ ಕಾಡುಕೋಣವನ್ನು ಓಡಿಸಿದರು. ಆದರೆ ಕಾಡುಕೋಣವು ಗ್ರಾಮದ ಏಕೈಕ ಸಂಪರ್ಕ ರಸ್ತೆಯಲ್ಲಿ ಅಡ್ಡವಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದು, ಇದರಿಂದ ಗ್ರಾಮಸ್ಥರ ಒಡಾಟಕ್ಕೆ  ಅಡಚಣೆಯಾಯಿತು. ಆ ನಂತರ ಗ್ರಾಮಸ್ಥರು ಹರಸಾಹಸಪಟ್ಟು ಕೋಣವನ್ನು ಕಾಡಿಗೆ ಅಟ್ಟಿದರು. ಈ ಭಾಗದಲ್ಲಿ ಆಗಾಗ್ಗೆ ಕಾಡುಕೋಣ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಜನರು ಭೀತಿಗೊಂಡಿದ್ದಾರೆ. ಕೆಲ […]