ಸುಶಾಂತ್ ಕೆರಮಠ ಇವರಿಗೆ ಉಪರಾಷ್ಟ್ರಪತಿಯಿಂದ ಪ್ರಶಸ್ತಿ ಪತ್ರದ ಮಾನ್ಯತೆ

ಉಡುಪಿ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಇದರ ಕಡಿಯಾಳಿ ವಲಯದ ರೋವರ್ ಘಟಕದ ಸಕ್ರಿಯ ಸದಸ್ಯ ಸುಶಾಂತ್ ಕೆರೆಮಠ ಇವರು ಸಮುದಾಯ ಸೇವೆ, ಸ್ವಚ್ಚತೆ ಹಾಗು‌ ಪರಿಸರ ಸಂಬಂಧಿತ ಸೇವೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು,  ಉಪರಾಷ್ಟ್ರಪತಿ ಯವರಿಂದ ಪ್ರಶಸ್ತಿ ಪತ್ರದ ಮಾನ್ಯತೆ ಪಡೆದಿರುತ್ತಾರೆ.

ರಾಜ್ಯ ಸಂಘಟನಾ ಸಹಾಯಕ ಕಮಿಷನರ್ ನಿತಿನ್ ಅಮೀನ್ ಗರಡಿಯಲ್ಲಿ ಪಳಗಿದ ಇವರು ಮೂಡುಬೆಟ್ಟು ಕೆರಮಠ ಸುಮನ ಹಾಗು ಶ್ರೀನಾಥ ದಂಪತಿಗಳ ಪುತ್ರ.