ಕಟಪಾಡಿ: ರಾಜ್ಯ ಮಟ್ಟದ ‘ವಿಕಸನ’ ರಜಾ ಶಿಬಿರ ಉದ್ಘಾಟನೆ

ಕಟಪಾಡಿ: ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸಿದ್ಧಾಂಥ್ ಫೌಂಡೇಶನ್ ನಡೆಸುವ ರಾಜ್ಯ ಮಟ್ಟದ ವಿಕಸನ ಶಿಬಿರದ ಉದ್ಘಾಟನೆಯು ಅಕ್ಟೋಬರ್ 9 ಸೋಮವಾರದಂದು ಕಟಪಾಡಿಯ ಎಸ್.ವಿ.ಎಸ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಸಿದ್ಧಾಂಥ್ ಫೌಂಡೇಶನ್ ನ ಟ್ರಸ್ಟಿ ನಮಿತಾ ಜಿ ಭಟ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯದೇವೇಂದ್ರ ನಾಯಕ್, ತ್ರಿಶಾ ವಿದ್ಯಾ ಪಿ.ಯು ಕಾಲೇಜಿನ ಪ್ರಾಂಶುಪಾಲ ಡಾ.ಅನಂತ ಪೈ, ಶಿಬಿರ ಸಂಚಾಲಕ ಧೀರಜ್ ಬೆಳ್ಳಾರೆ ಉಪಸ್ಥಿತರಿದ್ದರು.

ರಾಜ್ಯ ಮಟ್ಟದಲ್ಲಿ ನಡೆಯುವ ಈ ಶಿಬಿರದಲ್ಲಿ ಹತ್ತನೇ ತರಗತಿ ಪರೀಕ್ಷೆ ಎದುರಿಸುವ ಕ್ರಮಗಳು, ಹಾಡು, ನಾಟಕ, ಚಿತ್ರಕಲೆ ಮುಂತಾದ ಕಲೆಗಳು, ಕೈಗಾರಿಕಾ ಭೇಟಿ, ಚಾರಣ ಹಾಗೂ ಇನ್ನಿತರ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗುವ ಚಟುವಟಿಕೆಗಳು ನಡೆಯಲಿದೆ ಎಂದು ಶಿಬಿರ ಸಂಚಾಲಕರು ತಿಳಿಸಿದರು.

ವಿದ್ಯಾರ್ಥಿನಿ ಸಮೀಕ್ಷಾ ನಿರೂಪಿಸಿ, ವಂದಿಸಿದರು.