ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಮಣಿಪಾಲ ಸಂಶೋಧನಾ ವಿಭಾಗದ ಶ್ರೀನಿವಾಸನ್ ಎಚ್.ಆರ್

ಉಡುಪಿ: ಮಣಿಪಾಲ ಸಂಶೋಧನಾ ವಿಭಾಗದ ನವಿತಾಸ್ ಲೈಫ್ ಸೈನ್ಸಸ್ ನ ಶ್ರೀನಿವಾಸನ್ ಎಚ್.ಆರ್, ಮಣಿಪಾಲ ಎಕ್ರೋನ್ ಅಕುನೊವಾ ಇದರ ನಿರ್ದೇಶಕ ಗೌರಿಶಂಕರ್, ಉಪಾಧ್ಯಕ್ಷ ಡಾ.ವಾಸುದೇವ ಶೆಣೈ ಇವರು ಶ್ರೀಕೃಷ್ಣಮಠಕ್ಕೆ ಆಗಮಿಸಿ ದೇವರ ದರ್ಶನ ಮಾಡಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು. ಈ ಸಂದರ್ಭದಲ್ಲಿ, ಪರ್ಯಾಯ ಸ್ವಾಗತ ಸಮಿತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.