ಕೋಟ: ನವೀಕೃತ ಫೇವರೇಟ್ ಬಿಲ್ಡಿಂಗ್ ನಲ್ಲಿ ಶ್ರೀದೇವಿ ಜ್ಯುವೆಲ್ಲರ್ಸ್ ಶುಭಾರಂಭ

ಕೋಟ: 35 ಸಂವತ್ಸರಗಳ ಚಿನ್ನದ ವ್ಯವಹಾರದಲ್ಲಿ ವಿಶ್ವಾಸರ್ಹತೆಯೊಂದಿಗೆ ಕೋಟದ ಹೃದಯ ಭಾಗದಲ್ಲಿ ನವೀಕರಣಗೊಂಡ ಫೇವರೇಟ್ ಬಿಲ್ಡಿಂಗ್ ನ ಐತಾಳ್ ಕಾಂಪ್ಲೆಕ್ಸ್ ನಲ್ಲಿ ಶ್ರೀದೇವಿ ಜ್ಯುವೆಲ್ಲರ್ಸ್ ನ ಉದ್ಘಾಟನಾ ಸಮಾರಂಭವು ಆಗಸ್ಟ್ 5 ರಂದು ಶುಕ್ರವಾರ ಬೆಳಿಗ್ಗೆ ಜರುಗಿತು.

ಕಟ್ಟಡದ ಮಾಲಕಿ ಶ್ರೀಮತಿ ಪೂರ್ಣಿಮಾ ಶಂಕರ್ ಹೆಗ್ಡೆ ಉದ್ಘಾಟನೆಯನ್ನು ನೆರವೇರಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮೊಕೇಸರ ಆನಂದ್ ಸಿ.ಕುಂದರ್, ಶ್ರೀ ವಿರಾಡ್ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷ ರೊ. ಸುಬ್ರಾಯ ಆಚಾರ್ಯ ಮಣೂರು ಹಾಗೂ ಠಾಣಾಧಿಕಾರಿ ಮಧು, ಭಾಗವಹಿಸಿದ್ದರು.

ಮಾಂಡವಿ ಬಿಲ್ಡರ್ಸ್ ನ ಅಧ್ಯಕ್ಷ ಡಾ. ಜೆರ್ರಿ ವಿನ್ಸೆಂಟ್ ಡಯಾಸ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.

ರೊ.ಪಿ.ಎಚ್.ಎಫ್ ಸೌಮ್ಯ ಸೀತಾರಾಮ್ ಆಚಾರ್ಯ, ಶ್ರೀಮತಿ ಭಾಗ್ಯ ವಾದಿರಾಜ್, ಶ್ರೀಮತಿ ಸುಮಂಗಲಿ ಸುಧಾಕರ್, ಶ್ರೀಮತಿ ಕರುಣಾ ಮಹಾಬಲೇಶ್, ಶ್ರೀಮತಿ ವೀಣಾ ಪ್ರಭಾಕರ್ ಐತಾಳ್, ಶ್ರೀಮತಿ ಸುಮಾ ಉಮೇಶ್ ಪುತ್ರನ್ ಮುಂತಾದವರು ಉಪಸ್ಥಿತಿತರಿದ್ದರು.