ಶ್ರೀಕೃಷ್ಣಮಠದಲ್ಲಿ ಶ್ರೀ ಶೋಭಕೃತ್ ನಾಮ ಸಂವತ್ಸರದ ತಿಥಿ ನಿರ್ಣಯ ಪಂಚಾಂಗ ಬಿಡುಗಡೆ

ಉಡುಪಿ: ಶ್ರೀಕೃಷ್ಣಮಠದ ಶ್ರೀಮನ್ಮಧ್ವಾಚಾರ್ಯರ ಸರ್ವಜ್ಞಪೀಠದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು,ಭಾವೀ ಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ತಿಥಿ ನಿರ್ಣಯಾನುಸಾರ ತಿಥಿ ವೃದ್ಧಿ ಹ್ರಾಸ ನಿಯಮದಿಂದ ರಚಿತವಾದ ಬರುವ “ಶ್ರೀಶೋಭಕೃತ್” ನಾಮ ಸಂವತ್ಸರದ ತಿಥಿ ನಿರ್ಣಯ ಪಂಚಾಂಗವನ್ನು ಬಿಡುಗಡೆಗೊಳಿಸಿದರು.