ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪರ್ಕಳ: ಅಧ್ಯಕ್ಷರಾಗಿ ಅಶೋಕ್ ಕಾಮತ್ ಕೊಡಂಗೆ, ಉಪಾಧ್ಯಕ್ಷರಾಗಿ ಪಾಂಡುರಂಗ ಕಾಮತ್ ಎಳ್ಳಾರೆ ಅವಿರೋಧವಾಗಿ ಆಯ್ಕೆ

ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪರ್ಕಳ ಇದರ ಮುಂದಿನ ಐದು ವರ್ಷಗಳ‌ ಅವಧಿಗೆ ನೂತನ ಅಧ್ಯಕ್ಷರಾಗಿ ಅಶೋಕ್ ಕಾಮತ್ ಕೊಡಂಗೆ ಹಾಗೂ ಉಪಾಧ್ಯಕ್ಷರಾಗಿ ಪಾಂಡುರಂಗ ಕಾಮತ್ ಎಳ್ಳಾರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ಸೊಸೈಟಿಯಲ್ಲಿ ನಡೆದ ನೂತನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅವರು ಆಯ್ಕೆಯಾದರು.

ಸೊಸೈಟಿಯ ನಿರ್ದೇಶಕರಾಗಿ ಗಣಪತಿ ನಾಯಕ್ ಕೆ. ಪರ್ಕಳ, ಗಣಪತಿ ಪ್ರಭು ಕುಕ್ಕೆಹಳ್ಳಿ, ನರಸಿಂಹ ನಾಯಕ್ ಮಣಿಪಾಲ, ಪಾಂಡುರಂಗ ಕಾಮತ್ ಎಳ್ಳಾರೆ, ಮಹೇಶ್ ನಾಯಕ್ ಆತ್ರಾಡಿ, ರವೀಂದ್ರ ಪಾಟ್ಕರ್ ಬಂಟಕಲ್ಲು, ರಾಮಕೃಷ್ಣ ನಾಯಕ್ ಬಿ. ಪರ್ಕಳ, ವಿಜೇತ್ ಕುಮಾರ್ ಬೆಳ್ಳರ್ಪಾಡಿ, ಸದಾನಂದ ಎನ್ ನಾಯಕ್ ಹೆರ್ಗ, ಅಶೋಕ್ ಕಾಮತ್ ಕೊಡಂಗೆ, ಜಯಂತಿ ನಾಯಕ್ ಪರ್ಕಳ ಮತ್ತು ರೂಪ ನಾಯಕ್ ದೇವಿನಗರ ಅವರು ಆಯ್ಕೆಯಾಗಿದ್ದಾರೆ.