ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಸಾಮಾಜಿಕ ಸಾಮರಸ್ಯ ದಿನ ಆಚರಣೆ

ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ಇದರ ವತಿಯಿಂದ ಸಂವಿದಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 64ನೇ ಪುಣ್ಯತಿಥಿಯ ಪ್ರಯುಕ್ತ ಸಾಮಾಜಿಕ ಸಾಮರಸ್ಯ ದಿನವನ್ನು ಇಂದು ಕುಕ್ಕಿಕಟ್ಟೆಯ ಸರ್ಕಾರಿ ಬಾಲಕರ ವಸತಿಗೃಹದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಹಿರಿಯ ಕಾರ್ಯಕರ್ತ ಡಾ. ಶಿವಾನಂದ ನಾಯಕ್ ಉಪನ್ಯಾಸ ಭಾಷಣ ಮಾತನಾಡಿದರು.

ಜಿಲ್ಲಾ ಪ್ರಮುಖರಾದ ರಾಜಶೇಖರ್ ವಂದಿಸಿದರು. ಜಿಲ್ಲಾ ಸಹಸಂಚಾಲಕ ಆಶೀಶ್ ಶೆಟ್ಟಿ ಬೋಳ ಕಾರ್ಯಕ್ರಮ ನಿರೂಪಿಸಿದರು.