ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ: ಶಾಂತಿ‌ಮತೀ ಪ್ರತಿಷ್ಟಾನದ ಅಭಿನಂದನೆ ಸ್ವೀಕರಿಸಿ ಪೂರ್ಣಿಮಾ ಜನಾರ್ದನ್ ಅಭಿಮತ

ಬ್ರಹ್ಮಾವರ: ಎಲ್ಲರಲ್ಲೂ ಒಂದಲ್ಲ ಒಂದು ಸುಪ್ತಪ್ರತಿಭೆ ಅಡಗಿದೆ. ಆದರೆ ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಲ್ಲಿ ಮಾತ್ರ ಅಂತಹ ಪ್ರತಿಭೆಗಳು ಪ್ರಕಾಶಿಸುತ್ತವೆ ಎಂದು ಪೂರ್ಣಿಮಾ ಜನಾರ್ದನ್ ಹೇಳಿದರು.

ಬ್ರಹ್ಮಾವರ ಹಂದಾಡಿ ಶಾಂತಿ‌ಮತೀ ಪ್ರತಿಷ್ಟಾನ ಹಮ್ಮಿಕೊಂಡ ಸಾಧಕರೆಡೆ ನಮ್ಮ ನಡೆ ಕಾರ್ಯಕ್ರಮದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಶಾಂತಿ‌ಮತೀ ಪ್ರತಿಷ್ಟಾನ ವತಿಯಿಂದ ಸಾಧಕರೆಡೆ ನಮ್ಮ ನಡೆ. ನಮ್ಮ ಸಾಧನೆಯ ಬಗ್ಗೆ ನಾವೇ ಅಭಿಮಾನ‌ ಪಟ್ಟರೆ ಸಂತಸವೆನಿಸುತ್ತದೆ. ಆದರೆ ಸಾರ್ಥಕವೆನಿಸುವುದು ಇನ್ನೊಬ್ಬರು ಅಭಿಮಾನ ಪಟ್ಟಾಗ ಮಾತ್ರ ಎಂದರು.

ಶಾಂತಿಮತೀ ಪ್ರತಿಷ್ಟಾನದ  ವಿದ್ವಾನ್ ವಿಜಯ ಮಂಜರ ಮಾತನಾಡಿ, ಒಂದು ಮನೆ ಆ ಮನೆಮಂದಿ, ಆ‌ ಮನೆಯ ಸುತ್ತಲಿನ ಜನ, ಸಮುದಾಯ, ಒಂದು ಸಮಾಜ ಇವೆಲ್ಲವನ್ನೂ ಅಚ್ಚುಕಟ್ಟಾಗಿ ತೂಗಿಸಿಕೊಂಡು ಹೋಗುವ ಸ್ತ್ರೀ ಶಕ್ತಿ ನಿಜಕ್ಕೂ ಅದ್ಭುತ.
ಅಂತಹ ಮಹಿಳಾ ಶಕ್ತಿಯನ್ನು‌ ನಾವು ಗೌರವಿಸಬೇಕು ಎಂದರು.

ಉಡುಪ ರತ್ನ ಪ್ರತಿಷ್ಟಾನದ ಸಂಚಾಲಕ ಜನಾರ್ದನ ಕೊಡವೂರು ಸ್ವಾಗತಿಸಿದರು. ಶಾಂತಿ ಮತೀ ಪ್ರತಿಷ್ಟಾನದ ಅಧ್ಯಕ್ಷ ದಯಾನಂದ ವಾರಂಬಳ್ಳಿ ಪ್ರಾಸ್ತಾವಿಕ‌ವಾಗಿ ಮಾತನಾಡಿದರು. ನಳಿನಿ ಪ್ರದೀಪ್ ,ಯಶೋದಾ ಹೊಳ್ಳ ಶುಭಾಶಂಸನೆ ಮಾಡಿದರು. ಉಮೇಶ್ ಬಾಯರಿ ವಂದಿಸಿದರು.