ಸೆ. 6: ಸಾಣೂರು ಯುವಕ ಮಂಡಲದ ವತಿಯಿಂದ ಫಿಟ್ ಇಂಡಿಯಾ ಬೈಸಿಕಲ್ ಜಾಥಾ

ಕಾರ್ಕಳ: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ಉಡುಪಿ ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಯುವಕ ಮಂಡಲ ಸಾಣೂರು ಇದರ ಆಶ್ರಯದಲ್ಲಿ ಫಿಟ್ ಇಂಡಿಯಾ ಬೈಸಿಕಲ್ ಜಾಥಾ ಸೆಪ್ಟೆಂಬರ್‌ 6ರಂದು ಬೆಳಿಗ್ಗೆ 9 ಗಂಟೆಗೆ ಯುವಕ ಮಂಡಲದ ಮೈದಾನದಲ್ಲಿ  ನಡೆಯಲಿದೆ.

ಸರ್ಕಾರದ ಮುಖ್ಯ ಸಚೇತಕ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಜಾಥಕ್ಕೆ ಚಾಲನೆ ನೀಡುವರು ಎಂದು ಮಂಡಲದ ಪ್ರಕಟಣೆ ತಿಳಿಸಿದೆ.