ಮನೆಯಲ್ಲೇ ಅರಿಶಿನ ಗಣೇಶ ತಯಾರಿಸಿದ ಬೆಳ್ತಂಗಡಿ ಎಸ್ ಡಿಎಂನ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ  ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ “ಶ್ರೀ ಮಂಜುನಾಥ” ದಳದ ಸ್ಕೌಟ್ ಗೈಡ್ ವಿದ್ಯಾರ್ಥಿಗಳಾದ ಮಾಸ್ಟರ್ ಚಿನ್ಮಯಿ, ನಿಧಿ ಸಾಲಿಯಾನ್, ಆಷಿತ್ ಕಾಮತ್ ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯ ಆದೇಶದಂತೆ ಕರ್ನಾಟಕ ರಾಜ್ಯ ಮಾಲ್ಯಿನ್ಯ ನಿಯಂತ್ರಣ ಮಂಡಳಿಯ ಅರಿಶಿನ ಗಣೇಶ ಅಭಿಯಾನದಲ್ಲಿ ಭಾಗವಹಿಸಿ ಮನೆಯಲ್ಲಿ ಅರಿಶಿನ ಗಣೇಶ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಸ್ಕೌಟ್ ಮತ್ತು ಗೈಡ್ಸ್ ಮಕ್ಕಳು ಮನೆಯಲ್ಲೇ ಇದ್ದು ರಾಜ್ಯ ಸಂಸ್ಥೆಯ ಆದೇಶದಂತೆ ಈ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿರುವುದು ಸ್ಕೌಟ್ ಗೈಡ್ ನ ನಾಯಕತ್ವ ಗುಣವನ್ನು ತೋರಿಸುತ್ತಿದೆ.
ಇವರಿಗೆ ಮಾರ್ಗದರ್ಶನವನ್ನು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ, ಎಸ್ ಡಿಎಂನ  ಕ್ಯಾಪ್ಟನ್ ಪ್ರಮೀಳಾ ನೀಡಿರುತ್ತಾರೆ.