ಉಡುಪಿ‌ ಉಸ್ತುವಾರಿ ಸಚಿವರಾಗಿ ಎಸ್ ಅಂಗಾರ, ದ.ಕ. ಉಸ್ತುವಾರಿ ಸಚಿವರಾಗಿ ಸುನಿಲ್ ಕುಮಾರ್ ನೇಮಕ

ಉಡುಪಿ: ಉಡುಪಿ ಜಿಲ್ಲಾ ಕೋವಿಡ್ ಉಸ್ತುವಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮೀನುಗಾರಿಕಾ ಸಚಿವ ಎಸ್ ಅಂಗಾರ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ದ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇಂಧನ ಹಾಗೂ ಕನ್ನಡ-ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಮಾಜಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನೇಮಕಗೊಂಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ:

ಶ್ರೀರಾಮುಲು- ಬಳ್ಳಾರಿ

ಗೋವಿಂದ ಕಾರಜೋಳ- ಬೆಳಗಾವಿ

ಕೆ.ಎಸ್.ಈಶ್ವರಪ್ಪ- ಚಿಕ್ಕಮಗಳೂರು

ವಿ.ಸೋಮಣ್ಣ- ಚಾಮರಾಜನಗರ

ಉಮೇಶ್ ಕತ್ತಿ- ವಿಜಯಪುರ

ಆರಗ ಜ್ಞಾನೇಂದ್ರ- ತುಮಕೂರು

ಸಿ.ಸಿ.ಪಾಟೀಲ್- ಬಾಗಲಕೋಟೆ

ಆನಂದ್ ಸಿಂಗ್ –  ಕೊಪ್ಪಳ

ಪ್ರಭು ಚೌಹಾಣ್- ಯಾದಗಿರಿ

ಮುರುಗೇಶ್ ನಿರಾಣಿ- ಕಲಬುರಗಿ

ಎಸ್.​ಟಿ.ಸೋಮಶೇಖರ್- ಮೈಸೂರು

ಬಿ.ಸಿ.ಪಾಟೀಲ್- ಚಿತ್ರದುರ್ಗ, ಗದಗ

ಬೈರತಿ ಬಸವರಾಜ್- ದಾವಣಗೆರೆ

ಡಾ.ಕೆ.ಸುಧಾಕರ್- ಬೆಂಗಳೂರು ಗ್ರಾಮಾಂತರ

ಕೆ.ಗೋಪಾಲಯ್ಯ- ಹಾಸನ, ಮಂಡ್ಯ

ಶಶಿಕಲಾ ಜೊಲ್ಲೆ- ವಿಜಯನಗರ

ಎಂಟಿಬಿ ನಾಗರಾಜ್- ಚಿಕ್ಕಬಳ್ಳಾಪುರ

ಕೆ.ಸಿ.ನಾರಾಯಣಗೌಡ- ಶಿವಮೊಗ್ಗ

ಬಿ.ಸಿ.ನಾಗೇಶ್- ಕೊಡಗು

ಹಾಲಪ್ಪ ಆಚಾರ್- ಧಾರವಾಡ

ಶಂಕರ ಪಾಟೀಲ್ ಮುನೇನಕೊಪ್ಪ- ರಾಯಚೂರು, ಬೀದರ್

ಮುನಿರತ್ನ- ಕೋಲಾರ