ಕ್ಯಾನ್ಸರ್ ಗೆ ಔಷಧ ನೀಡುತ್ತಿದ್ದ ನಾಟಿವೈದ್ಯ ನಾರಾಯಣ ಮೂರ್ತಿ ನಿಧನ

ಶಿವಮೊಗ್ಗ: ಕ್ಯಾನ್ಸರ್ ಗೆ ಔಷಧ ನೀಡುತ್ತಿದ್ದ ಸಾಗರ ಆನಂದಪುರ ಸಮೀಪದ ನರಸೀಪುರದ ನಾಟಿವೈದ್ಯ ನಾರಾಯಣ ಮೂರ್ತಿ (81) ಅವರು ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರು ಹಲವಾರು ದಶಕಗಳಿಂದ ಕ್ಯಾನ್ಸರ್, ಮೂಳೆ ನೋವು, ಮಧುಮೇಹ, ಚರ್ಮರೋಗ ಸೇರಿದಂತೆ ಹಲವು ಮಾರಕ ಕಾಯಿಲೆಗಳಿಗೆ ಔಷಧವನ್ನು ನೀಡುವ ಮೂಲಕ ದೇಶ ವಿದೇಶಗಳಲ್ಲಿ ಖ್ಯಾತಿ ಹೊಂದಿದ್ದರು.
ಅವರು ನಾಲ್ಕು ಹೆಣ್ಣು ಮಕ್ಕಳು, ಒಬ್ಬ ಮಗ ಹಾಗೂ ಪತ್ನಿಯನ್ನು ಅಗಲಿದ್ದಾರೆ.