ಮಂಗಳೂರು: ಎಸ್.ಕೆ. ಗೋಲ್ಡ್ಸ್ಮಿತ್ ಇಂಡಸ್ಟ್ರಿಯಲ್
ಕೋ-ಆಪರೇಟಿವ್ ಸೊಸೈಟಿ 2024-2025 ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅಧ್ಯಕ್ಷತೆಯಲ್ಲಿ ನಗರದ ಉರ್ವಸ್ಟೋರ್ ಡಾ.ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಭಾನುವಾರ ಜರುಗಿತು.
ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ 2024-2025 ರ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ವಜ್ರಮಹೋತ್ಸವ ವರ್ಷದ ಪ್ರಯುಕ್ತ 2024- 2025 ರ ಸಾಲಿಗೆ ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ಪಾವತಿಗೆ ಮಂಜೂರಾತಿ ಪಡೆಯಲಾಯಿತು.

ಪಂಚ ಕಸುಬುಗಳಲ್ಲಿ ಸಾಧನೆಗೈದ ಐವರು ಶಿಲ್ಪಿಗಳಾದ ಸ್ವರ್ಣಶಿಲ್ಪ-ಎನ್.ರಾಮಚಂದ್ರ ಆಚಾರ್ಯ ನಿಟ್ಟೆ, ಕಾಷ್ಠಶಿಲ್ಪ-ಬಳ್ಕೂರು ಗೋಪಾಲ ಆಚಾರ್ಯ ಮಣಿಪಾಲ, ಎರಕ ಶಿಲ್ಪ-ಜಿ.ಹರಿಶ್ಚಂದ್ರ ಆಚಾರ್ಯ ಕೊಕ್ರಾಡಿ ಬೆಳ್ತಂಗಡಿ, ಅಯಸ್ ಶಿಲ್ಪ-ಲೀಲಾವತಿ ಆಚಾರ್ಯ ಗುತ್ತಿಗಾರ್, ಶಿಲಾ ಶಿಲ್ಪ-ಜನಾರ್ದನ ಆಚಾರ್ಯ ಅತ್ತೂರು ಅವರಿಗೆ 2024-2025 ರ ಸಾಲಿನ ಎಸ್. ಕೆ.ಜಿ.ಐ.ಪಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿವಿಧ ಕ್ಷೇತ್ರಗಳ ಸಾಧಕರಾದ ಕೆ.ಉಮೇಶ್ ತಂತ್ರಿ-ವೈದಿಕ, ಯಶವಂತ ಎಂ.ಜಿ-ಸಂಗೀತ, ಎನ್.ಆರ್.ದಾಮೋದರ ಶರ್ಮಾ-ವಾಗ್ಮಿ, ಕೆ.ಜೆ.ಗಣೇಶ್ ಆಚಾರ್ಯ- ಯಕ್ಷಗಾನ, ಎ.ಜಿ.ಸದಾಶಿವ ಮಂಗಳಾದೇವಿ-ಕಲೆ, ಕೆ.ಲಕ್ಷ್ಮೀನಾರಾಯಣ-ಚಿತ್ರಕಲೆ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಯಿತು. ಸಂಸ್ಥೆಯ ಸ್ಥಾಪಕಾಧ್ಯಕ್ಷ ದೇವ ಮಾನವ ಪಾಲ್ಕೆ ಬಾಬುರಾಯ ಆಚಾರ್ಯ ಅವರ ಕಲಾಕೃತಿಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ರಚಿಸಿಕೊಟ್ಟ ಮಧುಸೂದನ ಆಚಾರ್ಯ ಪಡುಬಿದ್ರಿ ಅವರನ್ನು ಸನ್ಮಾನಿಸಲಾಯಿತು.

ಮಂಗಳೂರು ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅಧ್ಯಕ್ಷತೆಯಲ್ಲಿ ಜರುಗಿತು. ಉಪಾಧ್ಯಕ್ಷ ಎ.ಆನಂದ ಆಚಾರ್ಯ, ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ, ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ.ವಿಶ್ವಜ್ಞಮೂರ್ತಿ, ವಿ.ಜಯ ಆಚಾರ್ಯ, ಕೆ.ಶಶಿಕಾಂತ್ ಆಚಾರ್ಯ ಇದ್ದರು.

2024-2025 ನೇ ಸಾಲಿನ ಸರ್ವತೋಮುಖ ಅಭಿವೃದ್ಧಿಗಾಗಿ ಶಾಖೆಗಳನ್ನು ಎರಡು ವರ್ಗಗಳನ್ನಾಗಿ ವಿಂಗಡಿಸಿ ಒಂದನೇ ವರ್ಗದಲ್ಲಿ ಪ್ರಥಮ ಸ್ಥಾನ ಕೋಟೇಶ್ವರ ಶಾಖೆ ಮತ್ತು ದ್ವಿತೀಯ ಸ್ಥಾನ ಉಡುಪಿ ಶಾಖೆಗೆ ನೀಡಲಾಯಿತು. ಎರಡನೇ ವರ್ಗದಲ್ಲಿ ಸಂತೆಕಟ್ಟೆ-ಕಲ್ಯಾಣ್ಪುರ ಶಾಖೆ ಪ್ರಥಮ ಮತ್ತು ಶಿರ್ವ-ಮಂಚಕಲ್ ಶಾಖೆಗೆ ದ್ವಿತೀಯ ಸ್ಥಾನ ನೀಡಲಾಯಿತು. ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಮಾತನಾಡಿ, ಸೊಸೈಟಿ 2024- 2025 ನೇ ಸಾಲಿನಲ್ಲಿ 6,09,42,839.61 ರೂ. ನಿವ್ವಳ ಲಾಭಗಳಿಸಿದೆ. ಸಂಸ್ಥೆಯ ಕಾರ್ಯ ಚಟುವಟಿಕೆಗಳು ಎಲ್ಲರ ಹೃದಯ ತಟ್ಟಿದಲ್ಲಿ ಅದೇ ಸಂತೃಪ್ತಿ ಎಂದರು.

ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ.ವಿಶ್ವಜ್ಞಮೂರ್ತಿ, ವಿ.ಜಯ ಆಚಾರ್ಯ, ಕೆ.ಶಶಿಕಾಂತ್ ಅಚಾರ್ಯ, ಮಲ್ಲಪ್ಪ ಎನ್.ಪತ್ತಾರ್, ರೋಹಿಣಿ ಎಂ.ಪಿ., ಜ್ಯೋತಿ ಎಂ.ವಿ., ರಮೇಶ್ ರಾವ್ ಯು. ಪ್ರಕಾಶ್ ಆಚಾರ್ಯ ಕೆ.. ಮಂಜುನಾಥ ಆಚಾರ್ಯ ಮತ್ತು ಚಂದ್ರಶೇಖರ ಎ.ಎಸ್. ಉಪಸ್ಥಿತರಿದ್ದರು. ಉಪಾಧ್ಯಕ್ಷ ಎ.ಆನಂದ ಆಚಾರ್ಯ ಸ್ವಾಗತಿಸಿದರು. ಉಷಾ ಮನೋಜ್ ಹಾಗೂ ಶ್ರೀಕಾಂತ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಪ್ರಕಾಶ್ ಆಚಾರ್ಯ ಕೆ. ವಂದಿಸಿದರು.












