ಮಣಿಪಾಲ:ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

ಮಣಿಪಾಲ:ರೋಟರಿ ಕ್ಲಬ್ ಮಣಿಪಾಲದ 2020 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜಿಲ್ಲಾ ಗವರ್ನರ್ ಡಾ.ಗೌರಿ ಅವರ ಮಾರ್ಗದರ್ಶನದಲ್ಲಿ ಜು.15 ರಂದು ಜರಗಿತು.ನೂತನ ಅಧ್ಯಕ್ಷರಾಗಿ ಡಾ.ರವೀಂದ್ರ ನಾಯಕ್, ಕಾರ್ಯದರ್ಶಿಯಾಗಿ ಜ್ಯೋತಿ ಆರ್ ನಾಯಕ್, ಖಜಾಂಚಿಯಾಗಿ  ಗೋಪಾಲ ಗಾಣಿಗ ಪದಗ್ರಹಣ ಸ್ವೀಕರಿಸಿದರು. ನೂತನವಾಗಿ ಆಯ್ಕೆಯಾದವರಿಗೆ ಪದಗ್ರಹಣ ಭೋಧಿಸಲಾಯಿತು.

ಗವರ್ನರ್ ಆನಂದ ಉದ್ಯಾವರ, ಸಂತೆಕಟ್ಟೆ ರಾಮದಾಸ ನಾಯ್ಕ್, ಪೆರ್ಡೂರು ಸಮನ್ವಯ ಅಧಿಕಾರಿ ರಾಜೇಶ್ ಡಿ, ಸ್ಥಾಪಕಾಧ್ಯಕ್ಷ ಸೇಸಪ್ಪ ರೈ,  ಹಿಂದಿ ಅಧ್ಯಕ್ಷರುಗಳಾದ ಸಚ್ಚಿದನಂದ ನಾಯಕ್, ಡಾ.ನಯನಾಭಿರಾಮ ಉಡುಪ, ಡಾ.ಕೆಂಪರಾಜ್, ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀಧರ್ ಡಿ, ಕೆ.ಎಸ್.ಜೈ ವಿಠ್ಠಲ್, ಉಡುಪಿ ರೋಟರಿ ಅಧ್ಯಕ್ಷೆ ರಾಧಿಕ ಲಕ್ಷ್ಮೀ ನಾರಾಯಣ, ನಿತ್ಯಾನಂದ ನಾಯಕ್ ಹಾಗೂ ರೋಟರಿ ಸದಸ್ಯರುಗಳು ಇದ್ದರು.

ಡಾ.ಭರತ್ ರಾಜಗುರು ಪ್ರಾರ್ಥಿಸಿದರು. ಕಾರ್ಯದರ್ಶಿ ಜ್ಯೋತಿ ನಾಯಕ್ ವಂದಿಸಿದರು.