ಅಷ್ಟಮಿ ಪ್ರಯುಕ್ತ ಕೃಷ್ಣಮಠದಲ್ಲಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಲ್ಲಿದೆ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಯವ ಕಾರ್ಯಕ್ರಮಗಳ ವಿವರ ಈ ಕೆಳಕಂಡಂತಿವೆ.

ಸೆಪ್ಟೆಂಬರ್ 10ರಂದು ಗುರುವಾರ:

ಬೆಳಿಗ್ಗೆ 7.30ಕ್ಕೆ ಲಕ್ಷ ತುಳಸಿ ಅರ್ಚನೆ, ಮಹಾಪೂಜೆಯ
10.30-1.00: ದಾಮೋದರ ಸೇರಿಗಾರ್ ಅವರಿಂದ ಸ್ಯಾಕ್ಸೋಫೋನ್ ವಾದನ
1.00-03.00:- ಪಾವನ ಬಿ. ಆಚಾರ್ಯ ಇವರಿಂದ ವೀಣಾ ವಾದನ

ಸಂಜೆ 5.30: ಪ್ರವಚನ ಮಾಲಿಕೆಯ ಕಾರ್ಯಕ್ರಮ
ಅದಮಾರು ಮಠದ ಹಿರಿಯ ವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಪೀಠಾಧೀಶ ಈಶಪ್ರಿಯತೀರ್ಥ ಶ್ರೀಪಾದರು ಉಪಸ್ಥಿತರಿರುವರು.

ರಾತ್ರಿ 7.30: “ಶ್ರೀಕೃಷ್ಣಾವತರಣಮ್”- ಸಂಸ್ಕೃತ ಯಕ್ಷಗಾನ ತಾಳಮದ್ದಲೆ

ರಾತ್ರಿ 10.00ರಿಂದ ಅರ್ಘ್ಯ ಪ್ರದಾನದವರೆಗೆ ಕೆ. ಎಂ. ಮಣಿ ಮತ್ತು ಬಳಗ, ಶಿವಮೊಗ್ಗ ಇವರಿಂದ ನಾದಸ್ವರ ವಾದನ (ಸೂರ್ಯಶಾಲೆಯಲ್ಲಿ)

ಸೆಪ್ಟೆಂಬರ್ 11ರಂದು ಶುಕ್ರವಾರ:

ಬೆಳಿಗ್ಗೆ 08.00-11.00:- ಪ್ರಶಾಂತ್ ಜೋಗಿ ಸಜೀಪ ಇವರಿಂದ ನಾದಸ್ವರ
11.00-12.00:- ಮಾಧವ ಶಿವಪುರ ಇವರಿಂದ ಮುಖವೀಣೆ
12.00-01.00:- ಅಲೆವೂರು ರಾಘವ ಸೇರಿಗಾರ್ ಅವರಿಂದ ನಾದಸ್ವರ
1.00-02.00:- ಶ್ರೀನಿವಾಸ ಪೆರ್ಡೂರು ಅವರಿಂದ ನಾದಸ್ವರ

2.00-03.00: ಅಲೆವೂರು ಉದಯ ಸೇರಿಗಾರ್ ಅವರಿಂದ ನಾದಸ್ವರ
3.00-05.00:- ಶಂತನು, ಉಡುಪಿ ಅವರಿಂದ ಕೊಳಲುವಾದನ
ರಾಜಾಂಗಣದಲ್ಲಿ ನಡೆಯುವ ಮೇಲಿನ ಎಲ್ಲಾ ಕಾರ್ಯಕ್ರಮಗಳನ್ನು ಭಕ್ತಾಭಿಮಾನಿಗಳು ಅದಮಾರು ಮಠದ ವೆಬ್‌ಸೈಟ್‌ (www.adamarumatha.com)
ಅಥವಾ ಯೂಟ್ಯೂಬ್ (adamarumathalive
https://www.youtube.com/channel/UCeOdFy66lqGJclr9CUlkJvA)
ಅಥವಾ C4U ಚಾನೆಲ್ ನಲ್ಲಿ ವೀಕ್ಷಿಸಬಹುದು ಎಂದು ಮಠದ ಪ್ರಕಟಣೆ ತಿಳಿಸಿದೆ.