ರಾಜಕೀಯದಲ್ಲಿ ಧರ್ಮ, ಧರ್ಮದಲ್ಲಿ ರಾಜಕೀಯವಲ್ಲ: ಕೆ. ವಿಜಯ್ ಕೊಡವೂರು

ಉಡುಪಿ: ಕೊಡವೂರು ವಾರ್ಡ್ ನಲ್ಲಿ ಆಗುವ ಜನಪರ ಮಾದರಿ ಕಾರ್ಯವನ್ನು ಗಮನಿಸಿ ನಿಸ್ವಾರ್ಥವಾದ ಸೇವಾ ಕಾರ್ಯದಿಂದ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದುಕೊಂಡು ಕೆಲಸ ಮಾಡುವಂತಹ ವಿಜಯ್ ಕೊಡವೂರು ಅವರನ್ನು ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು ಆಡಳಿತ ಮಂಡಳಿಯ ಪರವಾಗಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕೊಡವೂರು ರಾಜಕೀಯದಲ್ಲಿ ಧರ್ಮವನ್ನು ಆಧಾರಿಸಿಕೊಂಡು ಜನರ ಸೇವೆ ಮಾಡುವಾಗ ನಾವು ದೇವರ ಪ್ರೀತಿಗೆ ಪಾತ್ರರಾಗುತ್ತಾವೆ ಈ ಅವಕಾಶ ಪೂರ್ವಜನ್ಮದ ಪುಣ್ಯ ಮತ್ತು ಕಾರ್ಯಕರ್ತರು ದುಡಿದ ಫಲ ಆದ್ದರಿಂದ ಈ ಅವಕಾಶವನ್ನು ನಾವು 100% ಧರ್ಮ ರಹಿತವಾಗಿ ಉಪಯೋಗ ಮಾಡಿಕೊಳ್ಳುವಂತದ್ದು ನನ್ನ ಧ್ಯೇಯ, ಆದ್ದರಿಂದ ರಾಜಕೀಯದಲ್ಲಿ ಧರ್ಮ ಮಾಡಬೇಕು ಹೊರತಾಗಿ ಧರ್ಮದಲ್ಲಿ ರಾಜಕೀಯ ಮಾಡಬಾರದು ಎಂದು ಅವರು ತಿಳಿಸಿದರು.

ಈ ಸಂಧರ್ಬದಲ್ಲಿ ಹಿರಿಯರಾದ ಧರ್ಮಪಾಲ್ ದೇವಾಡಿಗ, ಹಿರಿಯಡ್ಕ ಮೋಹನ್ ದಾಸ್, ಪರಿಸರ ಪ್ರೇಮಿ ಸಂಘಟನೆಯ ಸ್ಥಾಪಕ, ಅಧ್ಯಕ್ಷರಾದ ತೋನ್ಸೆ ಜಯಕರ್ ಶೆಟ್ಟಿ, ಅಣ್ಣಯ್ಯ ಶೇರಿಗಾರ್, ಗಣೇಶ್ ದೇವಾಡಿಗ ಹಾಗೂ ಇನ್ನಿತರರು ಉಪಸ್ಥಿತರಿದ್ದರು.