ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ: ಅರ್ಜಿ ಆಹ್ವಾನ

ಉಡುಪಿ, ಮೇ 9: 2019-20 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಈ ಕೆಳಗೆ ನಮೂದಿಸಿರುವ ಕಾರ್ಯಕ್ರಮಗಳಡಿ ಸಹಾಯಧನ ಪಡೆಯಲು ಅರ್ಹ/ಆಸಕ್ತಿ  ರೈತರು/ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಬಾಳೆ ಪ್ರದೇಶ ವಿಸ್ತರಣೆ (ಕಂದುಗಳು ಮತ್ತು ಅಂಗಾಂಶ ಕೃಷಿ), ಅನಾನಸ್ಸು ಪ್ರದೇಶ ವಿಸ್ತರಣೆ, ಹೈಬ್ರಿಡ್ ತರಕಾರಿಗಳ ಪ್ರದೇಶ ವಿಸ್ತರಣೆ, ಕಾಳುಮೆಣಸು ಪ್ರದೇಶ ವಿಸ್ತರಣೆ, ಕೋಕೊ ಪ್ರದೇಶ ವಿಸ್ತರಣೆ, ಅಣಬೆ ಉತ್ಪಾದನಾ ಘಟಕ, ಗೇರು ಪುನಃಶ್ಚೇತನ, ಕಾಳುಮೆಣಸು ಪುನಃಶ್ಚೇತನ, ಕೃಷಿ ಹೊಂಡ(20*20*3 ಘ.ಮೀ.), ಹಸಿರು ಮನೆ (ಬೆಳೆಯೊಂದಿಗೆ), ನೆರಳು ಪರದೆ (ಬೆಳೆಯೊಂದಿಗೆ), ಸಮಗ್ರ ಪೀಡೆ/ಪೋಶಕಾಂಶ ನಿರ್ವಹಣೆ, ಜೇನು ಸಾಕಣೆ ಹಾಗೂ ಜೇನು ಸಂಗ್ರಹಣಾ ಉಪಕರಣ, 20 ಅಶ್ವಶಕ್ತಿವರೆಗಿನ ಟ್ರ್ಯಾಕ್ಟರ್, ತರಬೇತಿ/ಪ್ರವಾಸ, ಪ್ಯಾಕ್ ಹೌಸ್, ಪ್ರಾಥಮಿಕ ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕ, ಸೌರ ಶಾಖ ಘಟಕ, ಹಣ್ಣು ಮಾಗಿಸುವ ಘಟಕ, ಶೀತಲ ಕೊಠಡಿ,  ಸಗಟು ಮಾರಾಟ ಮಳಿಗೆಗೆ ಸಹಾಯ ಧನ ನೀಡಲಾಗುವುದು.

ಸಹಾಯಧನ:

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಲ್ಲಿ ಹನಿ/ತುಂತುರು ನೀರಾವರಿ ಅಳವಡಿಕೆಗೆ ಸಹಾಯಧನ : ತೋಟಗಾರಿಕೆ ಬೆಳೆಗಳಿಗೆ ಅನುಮೋದಿತ ಕಂಪನಿ ಅಥವಾ ಡೀಲರ್‍ಗಳಿಂದ ಹೊಸದಾಗಿ ಹನಿ/ತುಂತುರು ನೀರಾವರಿ ಅಳವಡಿಸುವ ರೈತರಿಗೆ ಇಲಾಖೆಯಿಂದ ಸಹಾಯಧನ ಲಭ್ಯವಿದ್ದು, ಪ್ರತಿ ಫಲಾನುಭವಿಯು ಗರಿಷ್ಟ 5.00 ಹೆಕ್ಟೆರ್ ವರೆಗೂ ಸಹಾಯಧನ ಪಡೆಯಬಹುದಾಗಿದೆ. ಮೊದಲ 2.00 ಹೆಕ್ಟೆರ್‍ಗೆ ಶೇ. 90 ಹಾಗೂ ನಂತರದ 3.00 ಹೆಕ್ಟೆರ್‍ಗೆ ಶೇ. 45 ಸಹಾಯಧನ ಲಭ್ಯವಿದೆ.

ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ :

2019-20 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ಗೇರು ಪ್ರದೇಶ ವಿಸ್ತರಣೆ, ನೇರಳೆ, ಮ್ಯಾಂಗೋಸ್ಟೀನ್ ಹಾಗೂ ರಾಮ್ ಬೂತಾನ್ ಪ್ರದೇಶ ವಿಸ್ತರಣೆ, ಸಣ್ಣ ಪ್ರಮಾಣದ ಅಣಬೆ ಉತ್ಪಾದನಾ ಘಟಕ ಕಾರ್ಯಕ್ರಮಗಳಡಿ ಸಹಾಯಧನ ಪಡೆಯಲು ಅರ್ಹ/ಆಸಕ್ತಿ  ರೈತರು/ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಆಸಕ್ತ ರೈತರು ಹೊಸ ಪಹಣಿ, ಆಧಾರ್ ಕಾರ್ಡ ಪ್ರತಿ ಹಾಗೂ ಅರ್ಜಿಯನ್ನು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಲ್ಲಾ ಪಂಚಾಯತ್‍ರವರಿಗೆ ಸಲ್ಲಿಸಿ ದಾಖಲು ಮಾಡಲು ಕೋರಿದ್ದು, ಅರ್ಜಿಗಳನ್ನು ಯೋಜನೆಯ ಮಾರ್ಗಸೂಚಿ ಹಾಗೂ ಜೇಷ್ಟತೆಯ ಅಧಾರದಲ್ಲಿ ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಉಡುಪಿ ದೂ. ಸಂ.  0820-2531950, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಉಡುಪಿ ದೂ. ಸಂ 0820-2522837, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿ.ಪಂ) ಕುಂದಾಪುರ ದೂ. ಸಂ. 08254-230813, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿ.ಪಂ), ಕಾರ್ಕಳ ದೂ. ಸಂ.  08258-230288 ಅನ್ನು ಸಂಪರ್ಕಿಸುವಂತೆ ಉಡುಪಿ ಜಿಲ್ಲಾ ಪಂಚಾಯತ್‍ನ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸದ್ದಾರೆ.