ರಾಜೀವನಗರ: ವಿಶ್ವಕರ್ಮ ಸಮಾಜೋದ್ಧಾರಕ ಸಂಘದಿಂದ ಋಗ್ ಉಪಾಕರ್ಮ ಕಾರ್ಯಕ್ರಮ

ವಿಶ್ವಕರ್ಮ ಸಮಾಜೋದ್ಧಾರಕ ಸಂಘ ರಾಜೀವನಗರ ಇದರ ವತಿಯಿಂದ ಋಗ್ ಉಪಾಕರ್ಮ ಕಾರ್ಯಕ್ರಮ ಸಂಘದ ಮಾಜಿ ಅಧ್ಯಕ್ಷ ವಾದಿರಾಜ ಆಚಾರ್ಯ ಅವರ ರಾಜೀವನಗರದ ನಿವಾಸದಲ್ಲಿ ಆ.3ರಂದು ನಡೆಯಿತು.

ಪುರೋಹಿತ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆದವು. ಈ ಸಂದರ್ಭದಲ್ಲಿ‌ ಸಮಾಜ ಬಾಂಧವರಿಗೆ ಯಜ್ನೋ ಪವಿತ್ರಧಾರಣೆ ಮಾಡಲಾಯಿತು.

ಸಂಘದ ಅಧ್ಯಕ್ಷ ದಯಾನಂದ ಆಚಾರ್ಯ ಉಪಾಧ್ಯಕ್ಷರಾದ ವಿಶ್ವಮೂರ್ತಿ ಆಚಾರ್ಯ, ಭಾಸ್ಕರ ಆಚಾರ್ಯ, ಕಾರ್ಯದರ್ಶಿ ಗಣೇಶ್ ಆಚಾರ್ಯ ರಾಜೀವನಗರ, ಕೋಶಾಧಿಕಾರಿ ಸೂರಜ್ ಕುಮಾರ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.