ಫೆ.25 ರಿಂದ ಮಂಗಳೂರು- ರಾಯಚೂರು ಮಾರ್ಗದಲ್ಲಿ ರಾಜಹಂಸ ಸಾರಿಗೆ ಕಾರ್ಯಾಚರಣೆ

ಉಡುಪಿ, ಫೆ.16: ಕ.ರಾ.ರ.ಸಾ.ನಿಗಮವು ಮಂಗಳೂರಿನಿಂದ ರಾಯಚೂರಿಗೆ ವಯಾ ಉಡುಪಿ-ಮಣಿಪಾಲ-ಕುಂದಾಪುರ-ಸಿದ್ಧಾಪುರ-ಮಾಸ್ತಿಕಟ್ಟೆ-ನಗರ-ಹೊಸನಗರ-ರಿಪ್ಪನ್‌ಪೇಟೆ- ಆಯನೂರು-ಶಿವಮೊಗ್ಗ-ಹೊನ್ನಾಳಿ-ಹರಿಹರ-ಹರಪನಹಳ್ಳಿ-ಹಗರಿಬೊಮ್ಮನಹಳ್ಳಿ-ಹೊಸಪೇಟೆ-ಗಂಗಾವತಿ-ಸಿಂಧನೂರು-ಮಾನ್ವಿ ಮಾರ್ಗವಾಗಿ ಹೊಸ ರಾಜಹಂಸ ಸಾರಿಗೆ ಕಾರ್ಯಾಚರಣೆಯನ್ನು ಫೆಬ್ರವರಿ 25 ರಿಂದ ಪ್ರಾರಂಭಿಸಲಾಗುತ್ತದೆ.

ಈ ಸಾರಿಗೆಯು ಮಂಗಳೂರು ಬಸ್ಸು ನಿಲ್ದಾಣದಿಂದ ಸಂಜೆ 4 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 05.30 ಕ್ಕೆ ರಾಯಚೂರು ತಲುಪುತ್ತದೆ. ಮರು ಪ್ರಯಾಣದಲ್ಲಿ ರಾಯಚೂರಿನಿಂದ ಸಂಜೆ 5 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 06.45 ಕ್ಕೆ ಮಂಗಳೂರಿಗೆ ತಲುಪುವುದು.

ಸಾರಿಗೆಯಲ್ಲಿ ಮಂಗಳೂರಿನಿಂದ ರಾಯಚೂರಿಗೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರ 850 ರೂ. ಇದ್ದು, ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇರುತ್ತದೆ.

ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ www.ksrtc.in , ಹತ್ತಿರದ ರಿಸರ್ವೇಶನ್ ಕೌಂಟರ್ ಅಥವಾ ಮಂಗಳೂರು ಬಸ್ ನಿಲ್ದಾಣ: ಮೊ.ನಂ.7760990720,  ಉಡುಪಿ ಮೊ.ನಂ: 9663266400, ಕುಂದಾಪುರ ಮೊ.ನಂ: 9663266009, ಶಿವಮೊಗ್ಗ ಮೊ.ನಂ: 7760036866, ರಾಯಚೂರು ಬಸ್ಸು ನಿಲ್ದಾಣ ಮೊ.ನಂ: 7760992370, ರಾಯಚೂರು ಕಂಟ್ರೋಲ್ ರೂಂ: 6366423883, ಹೊಸಪೇಟೆ ಬಸ್ಸು ನಿಲ್ದಾಣ : 08394-228804, ಸಿಂಧನೂರು ಬಸ್ಸು ನಿಲ್ದಾಣ :08335- 220236, ಹರಿಹರ ಬಸ್ಸು ನಿಲ್ದಾಣ ಮೊ.ನಂ: 7760036964, ಗಂಗಾವತಿ ಬಸ್ಸು ನಿಲ್ದಾಣ  :08533- 230344, ಮಂಗಳೂರು-02ನೇ ಘಟಕ ಮೊ.ನಂ : 7760990714,  ಕಂಟ್ರೋಲ್ ರೂಂ :6366423884 ಹಾಗೂ ಮೊ.ನಂ 7760990728 ಅನ್ನು ಸಂಪರ್ಕಿಸುವಂತೆ ಕ.ರಾ.ರ.ಸಾ.ಸಂ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.