ಭಾರತ ಉತ್ತಮ ಸ್ಥಿತಿಯಲ್ಲಿಲ್ಲ, ಪ್ರಧಾನಿ ನರೇಂದ್ರ ಮೋದಿ ಮಾತು ಕೇಳುತ್ತಿಲ್ಲ: ರಾಹುಲ್ ಗಾಂಧಿ

ಲಂಡನ್: ಮೇ 20 ಶುಕ್ರವಾರದಂದು ಲಂಡನ್‌ನಲ್ಲಿ ನಡೆದ “ಐಡಿಯಾಸ್ ಫಾರ್ ಇಂಡಿಯಾ” ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರದ ಭಾರತೀಯ ಜನತಾ ಪಕ್ಷ ಸರ್ಕಾರವನ್ನು ಟೀಕಿಸಿದ್ದಾರೆ. “ಭಾರತವು ಉತ್ತಮ ಸ್ಥಿತಿಯಲ್ಲಿಲ್ಲ” ಮತ್ತು ಪ್ರಧಾನಿ ನರೇಂದ್ರ ಮೋದಿ ” ಮಾತು ಕೇಳುವುದಿಲ್ಲ” ಎಂದು ಹೇಳಿರುವ ಅವರು ಭಾರತದ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ ಮತ್ತು ಈ ದಾಳಿಯ ಪರಿಣಾಮವಾಗಿ ಭಾರತದ ರಾಜ್ಯಗಳು “ಸರ್ಕಾರದೊಂದಿಗೆ ಇನ್ನು ಮುಂದೆ ಮಾತುಕತೆ ನಡೆಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅವರು ತಮ್ಮ ಪಕ್ಷದ ಪ್ರಯತ್ನಗಳನ್ನು ಶ್ಲಾಘಿಸುತ್ತಾ, “ಕಾಂಗ್ರೆಸ್ ಧ್ರುವೀಕರಣದ ವಿರುದ್ಧ ಹೋರಾಡುತ್ತಿದೆ. ನಾವು ಜನರನ್ನು ಒಟ್ಟಿಗೆ ಸೇರಿಸುವ ಸ್ಥಾನವನ್ನು ಹೊಂದಿದ್ದೇವೆ. ಭಾರತದಲ್ಲಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಅದನ್ನು ಮಾಡುತ್ತಿವೆ” ಎಂದಿದ್ದಾರೆ.