ಪುತ್ತಿಗೆ ಶ್ರೀಗಳ ಸುವರ್ಣ ಚಾತುರ್ಮಾಸ್ಯ ಕಾರ್ಯಕ್ರಮ

ಉಡುಪಿ: ಶುಕ್ರವಾರದಂದು ಮಠದ ಭಕ್ತರಾದ ಬೆಂಗಳೂರಿನ ವೆಂಕಟರಮಣ ಸೋಮಯಾಜಿ ಅವರು ಭಾವೀ ಪರ್ಯಾಯ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರನ್ನು ಆದರದಿಂದ ಬರಮಾಡಿಕೊಂಡು ವೈಭವೋಪೇತವಾಗಿ ಸಂಸ್ಥಾನಪೂಜೆ ಹಾಗೂ ಭಿಕ್ಷಾವಂದನೆ ಇತ್ಯಾದಿ ಕಾರ್ಯಕ್ರಮಗಳನ್ನು ನೆರವೇರಿಸಿ ಗುರುಗಳ ಹಾಗೂ ಶ್ರೀ ವಿಠಲ ದೇವರ ಅನುಗ್ರಹ ಪಡೆದುಕೊಂಡಾರು. ಈ ಸಂದರ್ಭದಲ್ಲಿ ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಅಭಿಯಾನ ನಡೆಯಿತು.