ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ಯೋಧರ ಸ್ಮರಣಾರ್ಥ ಬಸ್ ನಿಲ್ದಾಣ ಉದ್ಘಾಟನೆ

ಉಡುಪಿ:ವಿಷ್ಣುಮೂರ್ತಿ ದೇವಸ್ಥಾನ ಫ್ರೆಂಡ್ಸ್ – VMT(R.) ವತಿಯಿಂದ ಶ್ರೀ ನಗರದಲ್ಲಿ ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ಯೋಧರ ಸ್ಮರಣಾರ್ಥ ನೂತನವಾಗಿ ನಿರ್ಮಿಸಿದ ಬಸ್ ನಿಲ್ದಾಣದ ಉದ್ಘಾಟನೆಯನ್ನು  ಶಾಸಕ ಕೆ ರಘುಪತಿ ಭಟ್ ಸೋಮವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೈನಿಕರು ನಮ್ಮ ದೇಶವನ್ನು ಕಾಯುತ್ತಾರೆ, ಅಂತಹ ವೀರರನ್ನು ನಾವು ಪ್ರತಿದಿನ ನೆನೆಯಲೇಬೇಕು. ಆದ್ದರಿಂದ ಈ ಯುವಕರ ತಂಡದ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ,ಪಂಚಾಯತ್ ಸದಸ್ಯರುಗಳು ಹಾಗೂ ತಂಡದ ಪದಾಧಿಕಾರಿಗಳು ಉಪಸ್ಥಿತರಿದ್ದರು.
 
 
 
ಲಗತ್ತುಗಳ ಪ್ರದೇಶ