ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಕಂಟ್ರೋಲ್ ರೂಂ ಸ್ಥಾಪನೆ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಎದುರಾಗಬಹುದಾದ ಯಾವುದೇ ಸಂಭಾವ್ಯ ಅನಾಹುತಗಳನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತುರ್ತು ವಿಪತ್ತು ನಿರ್ವಹಣೆಗಾಗಿ 24*7 ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದ್ದು, ಈ ಮುಂದಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿ ದೂ.ಸಂಖ್ಯೆ: 0820-2574802 ಮತ್ತು ಟೋಲ್ ಫ್ರೀ ನಂಬರ್ 1077, ಪೊಲೀಸ್ ಇಲಾಖೆ ದೂ.ಸಂಖ್ಯೆ: 0820-2526444, ಜಿಲ್ಲಾ ಪಂಚಾಯತ್ ದೂ.ಸಂಖ್ಯೆ: 0820-2574945, ಆರೋಗ್ಯ ಇಲಾಖೆ ದೂ.ಸಂಖ್ಯೆ: 0820-2536650, ಮೆಸ್ಕಾಂ ಇಲಾಖೆ ದೂ.ಸಂಖ್ಯೆ: 0820-2521201, ಶಿಕ್ಷಣ ಇಲಾಖೆ ದೂ.ಸಂಖ್ಯೆ: 0820-2574970, ಉಡುಪಿ ತಾಲೂಕು ಕಚೇರಿ ದೂ.ಸಂಖ್ಯೆ: 0820-2520417, ಕಾರ್ಕಳ/ ಹೆಬ್ರಿ ತಾಲೂಕು ಕಚೇರಿ ದೂ.ಸಂಖ್ಯೆ: 08258-230201, ಕುಂದಾಪುರ ತಾಲೂಕು ಕಚೇರಿ ದೂ.ಸಂಖ್ಯೆ: 08254-230357, ಬೈಂದೂರು ತಾಲೂಕು ಕಚೇರಿ ದೂ.ಸಂಖ್ಯೆ: 08254-251657, ಬ್ರಹ್ಮಾವರ ತಾಲೂಕು ಕಚೇರಿ ದೂ.ಸಂಖ್ಯೆ: 0820-2560492, ಕಾಪು ತಾಲೂಕು ಕಚೇರಿ ದೂ.ಸಂಖ್ಯೆ: 0820-2591444, ಮೀನುಗಾರಿಕೆ ಇಲಾಖೆ ದೂ.ಸಂಖ್ಯೆ: 0820-2537044, ಉಡುಪಿ ತಾಲೂಕು ಪಂಚಾಯತ್ ದೂ.ಸಂಖ್ಯೆ: 0820-2520447, ಕುಂದಾಪುರ ತಾಲೂಕು ಪಂಚಾಯತ್ ದೂ.ಸಂಖ್ಯೆ: 08254-230360, ಕಾರ್ಕಳ ತಾಲೂಕು ಪಂಚಾಯತ್ ದೂ.ಸಂಖ್ಯೆ: 08258-230203, ಪೌರಾಯುಕ್ತರು ,ಉಡುಪಿ ನಗರಸಭೆ ದೂ.ಸಂಖ್ಯೆ: 0820-2520306, ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ದೂ.ಸಂಖ್ಯೆ: 08258-235664, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ದೂ.ಸಂಖ್ಯೆ: 08254-235160, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ದೂ.ಸಂಖ್ಯೆ: 0820-2564229.

ಸಾರ್ವಜನಿಕರು ಈ ನಿಯಂತ್ರಣ ಕೊಠಡಿಗಳಿಗೆ ಮಾಹಿತಿಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.