ಜು. 25 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಜುಲೈ 25 ಮತ್ತು 26 ರಂದು ಈ ಕೆಳಕಂಡ
ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
ಶಿರಿಯಾರ ಶಾಖಾ ವ್ಯಾಪ್ತಿಯಲ್ಲಿ Structure replacement, additional TC Work,
Railway Crossing shifting Work ಮತ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 110/11 ಕೆ.ವಿ ಮಧುವನ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಬಿಲ್ಲಾಡಿ, ಮಂದಾರ್ತಿ ಮತ್ತು ಶಿರಿಯಾರ ಫೀಡರ್‌ಗಳ ಶಿರಿಯಾರ, ಶಿರೂರು, ಅಚ್ಲಾಡಿ, ಸೈಬ್ರಕಟ್ಟೆ, ಹೆಸ್ಕತ್ತೂರು, ಯಡ್ತಾಡಿ, ಬಿಲ್ಲಾಡಿ, ವಂಡಾರು, ಆವರ್ಸೆ, ಮಂದಾರ್ತಿ, ಗುಡ್ಡಟ್ಟು, ಕಕ್ಕುಂಜೆ, ಹೆಗ್ಗುಂಜೆ, ಮಧುವನ, ಕೊಕ್ಕರ್ಣೆ, ಹೆಸ್ಕತ್ತೂರು, ಬೇಳೂರು, ಕೊರ್ಗಿ, ಕಾವಡಿ ಹಿಲಿಯಾಣ, ಹಳ್ಳಾಡಿ-ಹರ್ಕಾಡಿ ಹಾಗೂ ಬಾರಾಳಿ ಗ್ರಾಮಗಳ
ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜುಲೈ 25 ರಂದು ಬೆಳಗ್ಗೆ 9 ರಿಂದ ಸಂಜೆ 6 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುವುದು.

ನಾವುಂದ ಕೊಯಾನಗರ ರೈಲ್ವೆಬ್ರಿಡ್ಜ್ ರೋಡ್ ಕ್ರಾಸ್ 11 ಕೆ.ವಿ ಆಲೂರು, ಬಡಾಕೆರೆ ಹಾಗೂ ಹೇರೂರು ಮಾರ್ಗಗಳ ಓವರ್‌ಹೆಡ್ ಮಾರ್ಗವನ್ನು ಭೂಗತ ಕೇಬಲ್ ಮಾರ್ಗಕ್ಕೆ ಬದಲಾಯಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, 110/11 ಕೆ.ವಿ ನಾವುಂದ ವಿದ್ಯುತ್ ಉಪಕೇಂದ್ರದಿಂದ ಹೊರಡುವ 33/11 ಕೆ.ವಿ ಬೈಂದೂರು ಮತ್ತು ಕೊಲ್ಲೂರು ಮಾರ್ಗ ಮತ್ತು 11 ಕೆ.ವಿ ಆಲೂರು, ಬಡಾಕೆರೆ ಹಾಗೂ ಹೇರೂರು ಮಾರ್ಗಗಳಲ್ಲಿ ಬೈಂದೂರು, ಉಪ್ಪುಂದ, ಶಿರೂರು, ಗಂಗನಾಡು, ತೂದಳ್ಳಿ, ತಗ್ಗರ್ಸೆ, ಯಡ್ತರೆ, ಕೊಲ್ಲೂರು,
ಜಡ್ಕಲ್, ಇಡೂರು, ಹೊಸೂರು, ಮುದೂರು, ಗೋಳಿಹೊಳೆ,, ಯಳಜಿತ್, ಆಲೂರು, ಬಡಾಕೆರೆ ಮತ್ತು ಹೇರೂರು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜುಲೈ 25 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

110/11 ಕೆ.ವಿ ಮಧುವನ ಉಪಕೇಂದ್ರದಿಂದ ಹೊರಡುವ ಬಾರ್ಕೂರು ಎಕ್ಸ್ಪ್ರೆಸ್ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜುಲೈ 25 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ
ವ್ಯತ್ಯಯವಾಗಲಿದೆ.