ಮಂಗಳೂರು ಪೊಲೀಸ್ ಕಮೀಷನರ್ ಡಾ.ಪಿ .ಎಸ್ ಹರ್ಷ ಅವರಿಂದ ಅನುಮಾನಾಸ್ಪದ ತಂಡ ಫೋಟೋ ಬಿಡುಗಡೆ

ಮಂಗಳೂರು: ಆಗಸ್ಟ್ 17 ರಂದು ನಗರದಲ್ಲಿ ಅನುಮಾನಾಸ್ಪದ ತಂಡ ಓಡಾಟ ತಂಡವನ್ನು ಬಂಧಿಸಿ ಜಾಲಾಡಿದಾಗ ಬಂಧಿತ ವ್ಯಕ್ತಿಗಳು ತಮ್ಮ ಸುಳಿವನ್ನು ಅರ್ಧಮರ್ಧ ನೀಡಿದ್ದಾರೆ. ಆದರೂ ಈ ಆರೋಪಿಗಳಿಂದ ಇವರ ತಂಡದ ಕುರಿತು ಮಾಹಿತಿ ದೊರಕಿದೆ. ಈ ತಂಡ  ದೇಶಾದ್ಯಂತ ಸಂಚಾರ ಮಾಡಿದೆ. ಹಲವಾರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಡಾ.ಪಿ .ಎಸ್ ಹರ್ಷ ತಿಳಿಸಿದ್ದಾರೆ ಅವರು ಶನಿವಾರ ಹಮ್ಮಿಕೊಂಡ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
 ಬಂಧಿತ ವ್ಯಕ್ತಿಗಳನ್ನು ವಿಚಾರಿಸಿದಾಗ ವ್ಯಕ್ತಿಯೊಬ್ಬ ತನ್ನ ಗುರುತನ್ನು  ಮೊದಲು ಬಸೀದ್ ಶಾ ಎಂದು ಹೇಳಿದ್ದ ಬಳಿಕ  ವರ್ಲ್ಡ್ ಹೆಲ್ತ್ ಅರ್ಗನೇಷನ್ ನಲ್ಲಿ ಕೆಲಸ ಅಂತಾ ಹೇಳಿದ್ದ. ಕಾರು ಚಾಲಕನ ಹೆಸರು ಬಲ್ಜಿಂದರ್ ಸಿಂಗ್ ಎಂದು ಹೇಳಿದ್ದ ಬಳಿಕ  ಮುಂಬೈ ವಾಸಿ ಅಂದಿದ್ದ, ಆದರೆ  ಅದೂ ಸುಳ್ಳಾಗಿತ್ತು.ಕೊನೆಗೆ
ಪೊಲೀಸ್ ಕಸ್ಟಡಿ ವಿಚಾರಣೆ ವೇಳೆ ಆ ವ್ಯಕ್ತಿ  ಜಮ್ಮುಕಾಶ್ಮೀರ ನಿವಾಸಿ ಎಂದು ಗೊತ್ತಾಗಿದೆ
ಇವರ ತಂಡ ದೇಶಾದ್ಯಂತ ಸಂಚಾರ ಮಾಡಿದ್ದು ಹೈದರಾಬಾದ್ ಕೇರಳ ಗೋವಾ ಮುಂತಾದ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿದೆ ಈ ತಂಡ ವಿಲಾಸಿ ಜೀವನ ನಡೆಸುತ್ತಿತ್ತು.  ಇದರಲ್ಲಿರುವ ವ್ಯಕ್ತಿಗಳು ದೇಶಾದ್ಯಂತ ಮೋಸ ಮಾಡಿದ್ದ ತಿರುಗಾಡುತ್ತಿದ್ದರು. ಮ್ಯಾಟ್ರಿಮೋನಿಯಲ್ ಕೆಲಸ ಅಂತಾ ಹೇಳಿ ಹಲವು ಹುಡುಗಿಯರಿಗೆ ಮೋಸವನ್ನೂ ಮಾಡಿದ್ದರು ಎಂದು ಕಮಿಷನರ್ ಹೇಳಿದರು.
ಈ ಆರೋಪಿಗಳ ಬಗ್ಗೆ ಇನ್ನಷ್ಟು ಸೂಕ್ಷ್ಮ ವಿಚಾರಗಳಿವೆ ಆದರೆ ಅದನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ ಎಂದವರು ತಿಳಿಸಿದ್ದಾರೆ.