ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

ಕೊಟೇಶ್ವರ: ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘ ದೊಡ್ಡೋಣಿ ಕೋಟೇಶ್ವರ ಹಾಗೂ ಕುಂದಾಪುರ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೊಜನಾ ಘಟಕದ ಜಂಟಿ ಆಶ್ರಯದಲ್ಲಿ ಕಾಳವರ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಹಲವು ಜಾತಿಯ ಸಸ್ಯಗಳುನ್ನು ನೆಟ್ಟು ವನಮಹೋತ್ಸವ ಕಾರ್ಯಕ್ರಮವನ್ನು ನೆರವೆರಿಸಲಾಯಿತು.

ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ರಾಘವೇಂದ್ರ ಪೂಜಾರಿ , ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಕೋಟೇಶ್ವರ, ಉಪಾಧ್ಯಕ್ಷ ರಾದ ಸತೀಶ್ ಜೊತೆ ಕಾರ್ಯದರ್ಶಿ ಯೋಗೀಶ್ ಹಾಗು ಸಂಘದ ಸದಸ್ಯರುಗಳು ಮತ್ತು ಶಿವಲಿಲಾ .ಎಚ್. ಉಪವಲಯ ಅರಣ್ಯ ಅಧಿಕಾರಿ , ಶಾಲಾ ಪ್ರಾಂಶುಪಾಲರಾದ ರಾಜೇಂದ್ರ ಎಸ್ ನಾಯಕ , ಹಾಗೂ ಇತರರು ಉಪಸ್ಥಿತಿತರಿದ್ದರು..