ನೆಲ, ಜಲ, ಅರಣ್ಯ ಪರಿಸರ ಚಿತ್ರ ಬರಹ ಸ್ಪರ್ಧೆ

ಉಡುಪಿ, ಜುಲೈ 29: ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉಡುಪಿ ಘಟಕ ಆಯೋಜಿಸಿಕೊಂಡಿರುವ “ನೀರು ಆರುವ ಮುನ್ನ” ನೆಲ, ಜಲ, ಅರಣ್ಯ ಸಮೃದ್ಧಿ, ಸಿದ್ಧಿ ಸಂಕಲ್ಪದ ಜಾಗೃತಿ ಮತ್ತು ಅರಿವು ಕಾರ್ಯಕ್ರಮಕ್ಕೆ ಪೂರಕವಾಗಿ ಚಿತ್ರ ಬರಹ ಸ್ಪರ್ಧೆಯನ್ನು ಉಡುಪಿ ಜಿಲ್ಲೆಯ ಸಾರ್ವಜನಿಕರಿಗಾಗಿ ಆಯೋಜಿಸಿದೆ.
ನಿಮ್ಮ ಪರಿಸರದಲ್ಲಿ ನೆಲ ಜಲ ಅರಣ್ಯ ಪರಿಸರಕ್ಕಾಗಿ ನೀವು, ನಿಮ್ಮ ನೆರೆಹೊರೆಯವರು ಏನು ಮಾದರಿ ಕೆಲಸ ಮಾಡಿದ್ದೀರಿ ಎಂಬುದರ ಬಗ್ಗೆ ಚುಟುಕಾಗಿ ಬರೆದು ಕಳುಹಿಸಬೇಕು. ಜೊತೆಯಲ್ಲಿ ವಿಚಾರಕ್ಕೆ ಸಂಬಂಧಿಸಿದ ಉತ್ತಮ ಫೋಟೋ ಸಹ ಇರಲಿ. ಆಯ್ದ ಮೂರು ಚಿತ್ರ ಬರಹಗಳಿಗೆ ಆಕರ್ಷಕ ಬಹುಮಾನವಿದೆ. ಆಗಸ್ಟ್ 4 ರ ಒಳಗಾಗಿ ವಾಟ್ಸಾಪ್ ಸಂಖ್ಯೆ 9886822198 ಅಥವಾ ಇ-ಮೇಲ್ [email protected] ತಲುಪುವಂತಿರಲಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.