ಕಾಪು ಹಾಗೂ ಶ್ರೀ ಆನಂದ ತೀರ್ಥ ವಿದ್ಯಾಲಯ ಪಾಜಕ ಕ್ಷೇತ್ರ: ಜಿಲ್ಲಾ ಮಟ್ಟದ ಕಬ್ ಬುಲ್ ಬುಲ್ ಉತ್ಸವ

 

ಉಡುಪಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಉಡುಪಿ ಹಾಗೂ ಸ್ಥಳೀಯ ಸಂಸ್ಥೆ ಕಾಪು ಹಾಗೂ ಶ್ರೀ ಆನಂದ ತೀರ್ಥ ವಿದ್ಯಾಲಯ ಪಾಜಕ ಕ್ಷೇತ್ರ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಸಾಲಿನ ಕಬ್ ಬುಲ್ ಬುಲ್ ಉತ್ಸವವನ್ನು ನಡೆಸಲಾಯಿತು. ಎರಡು ದಿನಗಳ ಕಾಲ ನಡೆದ ಶಿಬಿರದಲ್ಲಿ ೫೦೦ ಕ್ಕಿಂತಲೂ ಹೆಚ್ಚಿನ ಕಬ್ಸ್ ಬುಲ್ ಬುಲ್ ಶಿಕ್ಷಕ-ಶಿಕ್ಷಕಿಯರು, ಸ್ವಯಂಸೇವಕರು, ಭಾಗವಹಿಸಿದ್ದು, ಧ್ವಜವಂದನೆ ಸರ್ವಧರ್ಮ ಪ್ರಾರ್ಥನೆ, ಭವ್ಯಶಿಬಿರಾಗ್ನಿ, ಕಲರವ, ಬೆದರುಗೊಂಬೆ ತಯಾರಿ, ಸಾಹಸಮಯ ಆಟಗಳು, ಹೊರ ಸಂಚಾರ, ಪುರಮೆರವಣಿಗೆ ಸಂದರ್ಭದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು. ಜನಪದ ನೃತ್ಯ, ಅಭಿನಯ ಗೀತೆ, ತೆಂಗಿನ ಗರಿಗಳಿಂದ ಕರಕುಶಲ ವಸ್ತುಗಳು, ಜಲ್ಲಿ ಕಲ್ಲುಗಳಿಂದ ಆಕೃತಿ ರಚಣೆ, ಮುಖವಾಡ ತಯಾರಿ, ಬಿ.ಪಿ ಚಿತ್ರರಚಣೆ, ಸ್ವಚ್ಚತೆ, ಆಟೋಟ, ಜನಪದ ಗೀತೆ ಸ್ಪರ್ಧೆ ಧ್ವಜ ವಂದನೆ ಮುಂತಾದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಿಬಿರದ ಉದ್ಘಾಟನೆಯನ್ನು ಶ್ರೀ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀ ಪಾದರು ಶ್ರೀ ಪೇಜಾವರ ಮಠ ಉಡುಪಿ ಇವರು ಶಿಬಿರ ಉದ್ಘಾಟಿಸಿದರು.

ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು  ಎನ್ ನಾಗರಾಜ ಬಲ್ಲಾಳ್ ಮಾತನಾಡಿದರು.

ಕಾರ್ಯಕ್ರಮದ ಆಧ್ಯಕ್ಷತೆಯನ್ನು ಜಿಲ್ಲಾ ಮುಖ್ಯ ಆಯುಕ್ತರುಶಾಂತಾ ವಿ ಆಚಾರ್ಯ  ವಹಿಸಿದ್ದರು.

ಜಿಲ್ಲಾ ಸ್ಕೌಟ್ಸ್ ಆಯುಕ್ತರು ಡಾ| ವಿಜಯೇಂದ್ರ ವಸಂತ್,  ಜ್ಯೋತಿ ಜೆ ಪೈ ಜಿಲ್ಲಾ ಗೈಡ್ಸ್ ಆಯುಕ್ತರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲಾ ಪ್ರಾಂಶುಪಾಲರು ಶ್ರೀಮತಿ ಗೀತಾ .ಎಸ್. ಕೊಟ್ಯಿಯನ್ ಎಲ್ಲರನ್ನೂ ಸ್ವಾಗತಿಸಿದರು.

ಶಿಬಿರದ ಮುನ್ನೋಟವನ್ನು ಶಿಬಿರದ ನಾಯಕಿಯಾದಕಾಂತಿ ನೀಡಿದರು.  ವಿದ್ಯಾ ವಂದಿಸಿದರು.

ಬಿ.ಆನಂದ ಅಡಿಗ ಜಿಲ್ಲಾ ತರಬೇತಿ ಆಯುಕ್ತರು (ಸ್ಕೌಟ್ಸ್) ಕಾರ್ಯಕ್ರಮ ನಿರೂಪಿಸಿದರು ಜಿಲ್ಲಾ ತರಬೇತಿ ಆಯುಕ್ತರು (ಗೈಡ್ಸ್) ಸಾವಿತ್ರಿ ಮನೋಹರ್  ರೂಪ ಬಲ್ಲಾಳ್ ಆಡಳಿತ ಮಂಡಳಿಯ ಸದಸ್ಯರು ಜ್ಯೋತಿ ಬುಲ್ ಬಯಲ್ ವಿಭಾಗದ ನಾಯಕಿ, ಡಾ|ಜಯರಾಮ್ ಶೆಟ್ಟಿಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ನೀಡಿದರು.