ನೈವೇದ್ಯ ಸಲ್ಲಿಸುವ ಅವಕಾಶ : ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಶಬರಿಮಲೆ ಅಯ್ಯಪ್ಪನಿಗೆ ಇ-ಕಾಣಿಕಾ ಸೌಲಭ್ಯ

ಶಬರಿಮಲೆ (ಕೇರಳ): ಈ ಹಿಂದೆ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ವರ್ಚುವಲ್​ ಸರತಿಯ ವ್ಯವಸ್ಥೆಯಲ್ಲಿ ದೇವಸ್ವಂ ಮಂಡಳಿ ಪ್ರಾರಂಭಿಸಿತ್ತು.
ದೇವಾಲಯಗಳಲ್ಲಿ ದೇವರಿಗೆ ನೈವೇದ್ಯ, ಪೂಜೆ ಸಲ್ಲಿಸಬೇಕಾದರೆ ದೇವಸ್ಥಾನಕ್ಕೇ ಹೋಗಬೇಕೆಂದಿಲ್ಲ.

ಈಗ ಮನೆಯಲ್ಲೇ ಕುಳಿತು ದೇವರಿಗೆ ಸಲ್ಲಿಸುವಂತಹ ತಂತ್ರಜ್ಞಾನಗಳು ಬೆಳೆದಿವೆ. ಆ ತಂತ್ರಜ್ಞಾನವನ್ನು ಹಲವು ದೇವಾಲಯಗಳು ಕೂಡ ಅಳವಡಿಸಿಕೊಂಡಿವೆ ಕೂಡ. ಅದರಂತೆಯೇ ಇನ್ಮುಂದೆ ಅಯ್ಯಪ್ಪ ಸ್ವಾಮಿಯ ಭಕ್ತರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಅಯ್ಯಪ್ಪ ಸ್ವಾಮಿಗೆ ನೈವೇದ್ಯ ಸಲ್ಲಿಸಬಹುದು.

ಶಬರಿಮಲೆಯ ಅಯ್ಯಪ್ಪನಿಗೆ ಭಕ್ತರು ಕಾಣಿಕೆ ಸಲ್ಲಿಸಲು ತಿರುವಾಂಕೂರು ದೇವಸ್ವಂ ಮಂಡಳಿಯು ಇ-ಕಾಣಿಕಾ (ಇ-ಕಾಣಿಕೆ) ಸೌಲಭ್ಯವನ್ನು ಸ್ಥಾಪಿಸಿದೆ. www.sabarimalaonline.org ವೆಬ್‌ಸೈಟ್​ನಲ್ಲಿ ಹೊಸ ಅವಕಾಶವನ್ನು ಭಕ್ತರಿಗಾಗಿ ತೆರೆದಿದೆ. ಆ ವೆಬ್​ಸೈಟ್​ ಮೂಲಕ ಭಕ್ತರು ಕಾಣಿಕೆ ಸಲ್ಲಿಸಬಹುದು. ದೇವಸ್ವಂ ಮಂಡಳಿ ಅಧ್ಯಕ್ಷ ಅಡ್ವ ಕೆ. ಅನಂತ ಗೋಪನ್ ಇ-ಕಾಣಿಕಾ (ಇ-ಕಾಣಿಕೆ) ವ್ಯವಸ್ಥೆಯನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭವನ್ನು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ಹಿರಿಯ ಪ್ರಧಾನ ವ್ಯವಸ್ಥಾಪಕರಿಂದ ಅರ್ಪಣೆ ಸ್ವೀಕರಿಸುವ ಮೂಲಕ ನೆರವೇರಿಸಲಾಯಿತು.

ಇ-ಕಾಣಿಕಾ (ಇ-ಕಾಣಿಕೆ) ವ್ಯವಸ್ಥೆ ಜಾರಿಯಿಂದ ಅಯ್ಯಪ್ಪನ ಭಕ್ತರು ಜಗತ್ತಿನ ಯಾವುದೇ ಮೂಲೆಯಿಂದ ಬೇಕಾದರೂ ನೈವೇದ್ಯ ಸಲ್ಲಿಸಬಹುದಾಗಿದೆ. ಈ ಮೂಲಕ ಕಾಣಿಕೆ ರೂಪದಲ್ಲಿ ಆದಾಯದಲ್ಲಿ ಭಾರಿ ಏರಿಕೆಯಾಗುವ ನಿರೀಕ್ಷೆಯನ್ನು ದೇವಸ್ವಂ ಮಂಡಳಿಯೂ ಹೊಂದಿದೆ. ಏತನ್ಮಧ್ಯೆ, ಈ ತಿಂಗಳ ಪೂಜೆಗಳಿಗಾಗಿ ಶಬರಿಮಲೆ ದೇವಸ್ಥಾನವನ್ನು ಜೂನ್ 15 ರಂದು ಸಂಜೆ 5 ಗಂಟೆಗೆ ತೆರೆಯಲಾಗುತ್ತದೆ. 16 ರಿಂದ 20ರವರೆಗೆ ಐದು ದಿನಗಳ ಕಾಲ ಸನ್ನಿಧಾನದಲ್ಲಿ ವಿಶೇಷ ಪೂಜೆಗಳು ಜರುಗಲಿವೆ.

ಇ-ಕಾಣಿಕಾ ವ್ಯವಸ್ಥೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದೇವಸ್ವಂ ಮಂಡಳಿ ಸದಸ್ಯರಾದ ಎಸ್. ಎಸ್. ಜೀವನ್, ಜಿ. ಸುಂದರೇಶನ್, ದೇವಸ್ವಂ ಆಯುಕ್ತ ಬಿ. ಎಸ್. ಪ್ರಕಾಶ್, ದೇವಸ್ವಂ ಮುಖ್ಯ ಇಂಜಿನಿಯರ್ ಆರ್. ಅಜಿತ್ ಕುಮಾರ್, ಲೆಕ್ಕಾಧಿಕಾರಿ ಸುನೀಲ, ವರ್ಚುವಲ್ ಸರತಿಯ ಅಧಿಕಾರಿ ಓ. ಜಿ. ಬಿಜು, ಸಹಾಯಕ ಕಾರ್ಯದರ್ಶಿ ರಶ್ಮಿ, ಐಟಿ ಪ್ರಾಜೆಕ್ಟ್ ಎಂಜಿನಿಯರ್ ಶರಣ್ ಜಿ ಭಾಗವಹಿಸಿದ್ದರು. ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರಿಗೆ ವರ್ಚುವಲ್ ಕ್ಯೂ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಸೇವೆಗಳನ್ನು ಒದಗಿಸುವ ಕುರಿತು ದೇವಸ್ವಂ ಮಂಡಳಿಯು ಟಿಸಿಎಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ.

ಶಬರಿಮಲೆ ದರ್ಶನಕ್ಕೆ ವರ್ಚುವಲ್ ಸರತಿ ವ್ಯವಸ್ಥೆ ಜಾರಿಗೆ ತಂದ ಬಳಿಕ ಇದೀಗ ದೇವಸ್ವಂ ಮಂಡಳಿ ಇ-ಕಾಣಿಕೆ ವ್ಯವಸ್ಥೆಯನ್ನೂ ಜಾರಿಗೆ ತಂದಿದೆ. ಈ ಮೊದಲು, ರಾಜ್ಯ ಪೊಲೀಸರ ವೆಬ್‌ಸೈಟ್ ಮೂಲಕ ವರ್ಚುವಲ್ ಕ್ಯೂ ಬುಕಿಂಗ್ ಮಾಡಲಾಗುತ್ತಿತ್ತು. ನಂತರ, ಹೈಕೋರ್ಟ್ ಸೂಚನೆಗಳನ್ನು ಅನುಸರಿಸಿ, ದೇವಸ್ವಂ ಮಂಡಳಿಯಿಂದ ನೇರವಾಗಿ ವರ್ಚುವಲ್ ಕ್ಯೂ ಬುಕಿಂಗ್ ಅನ್ನು ಕೈಗೊಳ್ಳಲಾಯಿತು. ವರ್ಚುವಲ್ ಕ್ಯೂ ಬುಕಿಂಗ್ ವ್ಯವಸ್ಥೆಯನ್ನು ಸಹ ಟಾಟಾ ಕಂಟಿನ್ಯೂಟಿ ಸರ್ವಿಸಸ್‌ಗೆ ವಹಿಸಲಾಗಿದೆ. ಮುಂದಿನ ತಿಂಗಳೊಳಗೆ ಇದಕ್ಕೆ ಸಂಪೂರ್ಣ ವ್ಯವಸ್ಥೆ ಮಾಡಲಾಗುತ್ತದೆ.