ಸೇನರ ಜಿಡ್ದ ಮಾರ್ಗಕ್ಕೆ ಅರುಣಾಬ್ಜ ಮಾರ್ಗ ನಾಮಕರಣ: ಆಕ್ಷೇಪಣೆ ಆಹ್ವಾನ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಕೊಡವೂರಿನ ಸಾಲ್ಮರದಿಂದ ಸೇನರ ಜಿಡ್ದಕ್ಕೆ ಹೋಗುವ ಮಾರ್ಗಕ್ಕೆ ಕವಿ ಅರುಣಾಬ್ಜ ಮಾರ್ಗ ಎಂದು ನಾಮಕರಣಗೊಳಿಸುವ ಕುರಿತು ಆಕ್ಷೇಪಣೆ ಹಾಗೂ ಸಲಹೆಗಳಿದ್ದಲ್ಲಿ 30 ದಿನಗಳ ಒಳಗೆ ನಗರಸಭೆ ಕಚೇರಿಗೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.