ದಸರಾ ಕ್ರೀಡಾಕೂಟ ನಗದು ಪುರಸ್ಕಾರ ಪಾವತಿಯಾಗದಿದ್ದಲ್ಲಿ ಮಾಹಿತಿ ನೀಡಿ

ಉಡುಪಿ: ದಸರಾ ಕ್ರೀಡಾಕೂಟ ಮುಖ್ಯಮಂತ್ರಿ ಕಪ್ -2023 ರಲ್ಲಿ ಪಾಲ್ಗೊಂಡು ಪದಕ ಪಡೆದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರದ ಮೊತ್ತವನ್ನು ಸಂಬಂಧಪಟ್ಟ ಕ್ರೀಡಾಪಟುಗಳ ಖಾತೆಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮೂಲಕ ವರ್ಗಾಯಿಸಲಾಗಿದ್ದು, ಇದರಲ್ಲಿ ಕೆಲವು ಕ್ರೀಡಾಪಟುಗಳ ಬ್ಯಾಂಕ್ ವಿವರ ಸರಿಯಾಗಿ ನಮೂದಿಸದ ಹಾಗೂ ಬ್ಯಾಂಕ್ ಖಾತೆ ಸರಿಯಲ್ಲದ ಕಾರಣ ಹಣ ಪಾವತಿಯಾಗಿರುವುದಿಲ್ಲ

ಆದ್ದರಿಂದ ದಸರಾ ಕ್ರೀಡಾಕೂಟ ಮುಖ್ಯಮಂತ್ರಿ ಕಪ್ -2023 ರಲ್ಲಿ ಪಾಲ್ಗೊಂಡು ಪದಕ ಪಡೆದ ಜಿಲ್ಲೆಯ ಕ್ರೀಡಾಪಟುಗಳು ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ, ನಗದು ಪುರಸ್ಕಾರ ಪಾವತಿಯಾಗದೇ ಇದ್ದಲ್ಲಿ ಸಹಾಯಕ ನಿರ್ದೇಶಕರು, ಯುವ
ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಇವರಿಗೆ ಮಾಹಿತಿ ನೀಡುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.