ನಿಟ್ಟೂರು: ವಾಹನ ಬಡಿದು ಗೂಳಿ ಸಾವು

ಉಡುಪಿ:  ಗೂಳಿಯೊಂದಕ್ಕೆ ವಾಹನ ಬಡಿದು ಗಂಭೀರ ಗಾಯಗೊಂಡು ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ನಿಟ್ಟೂರಿನ ಬಳಿ ನಡೆದಿದೆ.
 ಗಂಭೀರ ಗಾಯಗೊಂಡ ಗೂಳಿಗೆ ವಿಷಯ ತಿಳಿದ ವಿಶು ಶೆಟ್ಟಿ ತಕ್ಷಣ ಪಶು ವೈದ್ಯರ ಮೂಲಕ ಚಿಕಿತ್ಸೆ ನೀಡಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೆ ಗೂಳಿ ಭಾನುವಾರ ಮಧ್ಯಾಹ್ನ ಮೃತ ಪಟ್ಟಿದೆ. ನಂತರ ವಿಶು ಶೆಟ್ಟಿ ಅವರು ಜೆ.ಸಿ.ಬಿ ತರಿಸಿ ಮೃತ ಗೂಳಿಯ ಅಂತ್ಯ ಸಂಸ್ಕಾರ ನಡೆಸಿದರು. 
 
ತುರ್ತು ಚಿಕಿತ್ಸೆಗೆ ಸೌಲಭ್ಯ ಅಗತ್ಯವಿದೆ:   
ಪೆಟ್ಟಾದ ಪಶುಗಳಿಗೆ ತುರ್ತು ಚಿಕಿತ್ಸೆಗೆ ಮೂಲ ಸೌಕರ್ಯಗಳಿಲ್ಲದ ಕಾರಣ ಅದೆಷ್ಟೋ ಗೋವು ನಾನಾ ಕಾರಣಗಳಿಂದ ದುರಂತಕ್ಕೀಡದಾಗ ಗೋವುಗಳು ಪಡೆಯುವ ಹಿಂಸೆ, ನರಕಯಾತನೆ ಹೇಳತೀರದು. ಉಡುಪಿಯ ಕೃಷ್ಣನ ನಾಡಲ್ಲಿ ಗೋವುಗಳ ರಕ್ಷಣೆಯ ಬಗ್ಗೆ ಇನ್ನಷ್ಟು ಕೆಲಸಗಳು ಆಗಬೇಕಿದೆ. ಆದಕ್ಕಾಗಿ ಧಾರ್ಮಿಕ ಮುಖಂಡರು, ಸಂಘ-ಸಂಸ್ಥೆಗಳು, ಸರಕಾರ ದುರಂತಕ್ಕಿಡಾದ ಗೋವುಗಳ ರಕ್ಷಣಿಯ ಬಗ್ಗೆ ಮೂಲಭೂತ ಸೌಕರ್ಯ ಹಾಗೂ ಚಿಕಿತ್ಸೆ ನೀಡುವುದರ ಮೂಲಕ ಗೋವುಗಳ ನರಕಯಾತನೆಯ ಪರಿಹಾರದ ಬಗ್ಗೆ ಸೌಲಭ್ಯ ಒದಗಿಸಬೇಕಾಗಿ ವಿಶು ಶೆಟ್ಟಿ ವಿನಂತಿಸಿದ್ದಾರೆ.