ನಿಟ್ಟೆ: ಗ್ರಾಮ ಪಂಚಾಯತ್ ಸದಸ್ಯ, ಸಹಾಯಕ ಪ್ರಾಧ್ಯಾಪಕ ಸುರೇಶ್ ಶೆಟ್ಟರಿಗೆ ಡಾಕ್ಟರೇಟ್ ಪದವಿ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ನಿಟ್ಟೆ ಗ್ರಾಮ ಪಂಚಾಯತ್ ಸದಸ್ಯ ಬಲಿಪಗುತ್ತು ಸುರೇಶ್ ಶೆಟ್ಟಿ ಅವರು ‘ಎಕ್ಸ್ಪರಿಮೆಂಟಲ್ ಇನ್ವೆಷ್ಟಿಗೇಷನ್ ಆ್ಯಂಡ್ ಆರ್ಟಿಫಿಷಿಯಲ್ ನ್ಯೂರಲ್ ನೆಟ್‌ವರ್ಕ್‌ ಮಾಡೆಲಿಂಗ್ ಆಫ್ ಸೈಕಲ್ ಬೈ ಸೈಕಲ್ ಫ್ಲಕ್ಚುವೇಷನ್ಸ್ ಇನ್ ಡ್ಯೂಯಲ್ ಪ್ಲಗ್ ಎಸ್ಐ ಇಂಜಿನ್’ ಎಂಬ ವಿ‍ಷಯದ ಬಗೆಗೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಘೋಷಿಸಿದೆ.

ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಪರೀಕ್ಷಾ ನಿಯಂತ್ರಕ ಡಾ.ಶ್ರೀನಿವಾಸ ರಾವ್ ಬಿ.ಆರ್ ಮತ್ತು ಮಣಿಪಾಲದ ಎಂಐಟಿಯ ಪ್ರಾಧ್ಯಾಪಕ ಡಾ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಸುರೇಶ್ ಶೆಟ್ಟಿ ಅವರು ಈ ಸಂಶೋಧನೆಯನ್ನು ಪೂರ್ಣಗೊಳಿಸಿರುವರು.

ಸುರೇಶ್ ಶೆಟ್ಟಿ ಅವರು ಬಲಿಪಗುತ್ತು ವಿಠ್ಠಲ್ ಶೆಟ್ಟಿ ಹಾಗೂ ಕಣಂಜಾರು ಯಶೋದಾ ಶೆಟ್ಟಿ ಅವರ ಪುತ್ರ