ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ಉಡುಪಿ : ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಉಪಾಧ್ಯಕ್ಷರಾಗಿ ಸುಕೇಶ್ ಕುಂದರ್ ಹೆರ್ಗ, ನಾರಾಯಣ್ ಕುಂದರ್ ಕಲ್ಮಾಡಿ, ಗಣೇಶ್ ದೇವಾಡಿಗ ದೊಡ್ಡಣಗುಡ್ಡೆ, ಶರತ್ ಶೆಟ್ಟಿ ಲಕ್ಷ್ಮೀನಗರ, ಕಿರಣ್ ಕುಂದರ್ ಬಡಾನಿಡಿಯೂರು, ಕುಮಾರಿ ದೀಪಾ ಬಡಾನಿಡಿಯೂರು. ಪ್ರಧಾನ ಕಾರ್ಯದರ್ಶಿಗಳಾಗಿ ಸತೀಶ್ ಕುಮಾರ್ ಮಂಚಿ, ನವೀನ್ ಶೆಟ್ಟಿ ಕನ್ನರ್ಪಾಡಿ, ಪ್ರವೀಣ್ ಜಿ ಕೊಡವೂರು, ಸತೀಶ್ ಪುತ್ರನ್ ದೊಡ್ಡಣಗುಡ್ಡೆ, ತುಳಸಿದಾಸ್ ಗೋಪಾಲಪುರ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಗಳಾಗಿ ಶ್ರೀನಿವಾಸ್ ಹೆಬ್ಬಾರ್ ಕಡಿಯಾಳಿ, ತಾರಾನಾಥ್ ಸುವರ್ಣ ಕಡೆಕಾರ್, ಕೃಷ್ಣ ಹೆಬ್ಬಾರ್ ಸಗ್ರಿ, ಭರತ್ ಕುಮಾರ್ ಮಣಿಪಾಲ, ಯಾದವ್ ಆಚಾರ್ಯ ಕರಂಬಳ್ಳಿ, ಮ್ಯಾಕ್ಸಿಂ ಡಿ’ಸೋಜಾ ಬೈಲೂರು, ಆರಿಫ್ ರೆಹಮಾನ್ ಮಣಿಪಾಲ, ವಸಂತ್ ಪಡುಕೆರೆ, ಸಂತೋಷ್ ಕುಂದರ್ ಕೊಳ, ಪ್ರವೀಣ್ ಇಂದಿರಾನಗರ.ಜೊತೆ ಕಾರ್ಯದರ್ಶಿಗಳಾಗಿ ಶಶಿರಾಜ್ ಕುಂದರ್ ಕಡಿಯಾಳಿ, ಲಕ್ಷ್ಮಣ್ ಪೂಜಾರಿ ಪೆರಂಪಳ್ಳಿ, ಧನಂಜಯ್ ಕುಂದರ್ ತೆಂಕನಿಡಿಯೂರು, ಆಕಾಶ್ ರಾವ್ ಬೈಲೂರು, ಸತೀಶ್ ನಾಯ್ಕ್ ಕೆಳಾರ್ಕಳಬೆಟ್ಟು, ಸುಂದರ್ ಕಕ್ಕುಂಜೆ, ಸಂದೀಪ್ ಕೊಡಂಕೂರು ಆಯ್ಕೆಯಾಗಿದ್ದಾರೆ.

ಸಂಘಟನಾ ಕಾರ್ಯದರ್ಶಿಗಳಾಗಿ ರವಿರಾಜ್ ಲಕ್ಷ್ಮೀನಗರ, ಉದಯ್ ಪಂದುಬೆಟ್ಟು, ಸುದರ್ಶನ್ ಪಡುಕೆರೆ, ವಾಸಿಂ ರಝಾ ಕರಂಬಳ್ಳಿ, ಸುನೀಲ್ ಬೈಲಕೆರೆ, ಸಾಯಿರಾಜ್ ಕಿದಿಯೂರು, ಪ್ರದೀಪ್ ಕುಮಾರ್ ಮಲ್ಪೆ, ಸುಧಾಕರ್ ಪೂಜಾರಿ ಪರ್ಕಳ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಲತಾ ಆನಂದ ಶೇರಿಗಾರ್ ಸಗ್ರಿ, ಪ್ರದೀಪ್ ಶೇರಿಗಾರ್ ಕಸ್ತೂರ್ಬಾನಗರ, ಜೈವೀರ್ ಫೆಡ್ರಿಕ್ಸ್ 76ನೇ ಬಡಗುಬೆಟ್ಟು, ರಾಜೇಶ್ ನಾಯ್ಕ್ ಕೆಳಾರ್ಕಳಬೆಟ್ಟು, ದಿನೇಶ್ ಮೂಡುಬೆಟ್ಟು, ಅವಿನಾಶ್ ಕುಂದರ್ ಬೈಲೂರು, ಅರುಣ್ ಕುಮಾರ್ ಕುತ್ಪಾಡಿ, ಜಗದೀಶ್ ಸುವರ್ಣ ತೆಂಕನಿಡಿಯೂರು, ಸುಲ್ತಾನ್ ಸಾಹೇಬ್ ಗುಂಡಿಬೈಲು, ಪ್ರೇಮಲತಾ ಸೋನ್ಸ್ ಈಶ್ವರನಗರ, ಜಯಶ್ರೀ ಶೇಟ್ ತೆಂಕಪೇಟೆ, ಬೋನಿಪಾಸ್ ಸರಳೇಬೆಟ್ಟು, ವಿಶ್ವನಾಥ್ ಚಿಟ್ಪಾಡಿ, ಸುಧಾಕರ್ ಕನ್ನಾರ್ಪಾಡಿ ಆಯ್ಕೆಯಾಗಿದ್ದಾರೆ.

ವಕ್ತಾರರಾಗಿ ಸತೀಶ್ ಕೊಡವೂರು, ಪ್ರಭಾಕರ್ ಭಂಡಾರಿ ಬೈಲೂರು, ಮೇಘಾಶ್ಯಾಮ್ ಹೆಬ್ಬಾರ್ ಮಣಿಪಾಲ  ಆಯ್ಕೆಯಾಗಿದ್ದಾರೆ.

ಈ ಸಭೆಯ ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ದಿನೇಶ್ ಪುತ್ರನ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಕುಶಲ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ದೀಪಕ್ ಕೋಟ್ಯಾನ್, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಮಮತಾ ಶೆಟ್ಟಿ, ಉಡುಪಿ ಬ್ಲಾಕ್ ಎಸ್.ಸಿ ಘಟಕದ ಅಧ್ಯಕ್ಷ ಗಣೇಶ್ ನೆರ್ಗಿ, ಮಾಜಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಮಾರ್ಟಿನ್ ಜತ್ತನ್ನ ಹಾಗೂ ಮುಖಂಡರಾದ ಮೊಹಮ್ಮದ್ ಶೀಶ್ ಉಪಸ್ಥಿತರಿದ್ದರು.