ಶಿವಮೊಗ್ಗ ಜಿಲ್ಲೆಯಲ್ಲಿ ಈಸಿ ಲೈಫ್ ನೂತನ ಶಾಖೆಗಳ ಉದ್ಘಾಟನೆ

ಶಿವಮೊಗ್ಗ: ಕೃಷಿಕ ಮಿತ್ರರ ನಂಬಿಕೆ, ಪ್ರೀತಿ, ವಿಶ್ವಾಸರ್ಹ ಸೇವೆಗೆ ಹೆಸರಾದ “ಈಸೀ ಲೈಫ್ “ ಇದೀಗ ತೀರ್ಥಹಳ್ಳಿ, ಸಾಗರ, ಹೊಸನಗರ, ಶಿವಮೊಗ್ಗ ಜಿಲ್ಲಾದ್ಯಂತ ಗ್ರಾಹಕರ ಸೇವೆಗೆ ಸನ್ನದ್ಧವಾಗಿದೆ.

ಕೊಡಚಾದ್ರಿ ಕಾಲೇಜು ಎದುರು, ಶಿವಮೊಗ್ಗ ರೋಡ್, ಹೊಸನಗರದಲ್ಲಿ ನೂತನ ಶಾಖೆ  ಮೇ 22 ರಂದು    ಶುಭಾರಂಭಗೊಂಡಿದ್ದು, ಹೊಸನಗರ ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಕರಿ ಬಸವಯ್ಯ ಉಪಸ್ಥಿತರಿದ್ದರು.

ಸಂಜೆ 4 ಗಂಟೆಗೆ ಶಿವಮೊಗ್ಗ ರೋಡ್ , ಬೇಳಲ್ಮಕ್ಕಿ ಸಾಗರದಲ್ಲಿ ನೂತನ ಶಾಖೆ ಶುಭಾರಂಭಗೊಂಡಿದ್ದು, ಹೆಗ್ಡೆ ಡೈನಾಮಿಕ್ ಮಾಲಿಕರಾದ ಲಕ್ಷ್ಮೀನಾರಾಯಣ ಹೆಗ್ಡೆ , ಹಾಗೂ ಈಸೀ ಲೈಫ್ ಸಂಸ್ಥೆಯ ಮಾಲೀಕರಾದ ಗೋವಿಂದರಾಜ್ ಕಲಾಯಿ, ರವಿ ಕಲಾಯಿ, ಮ್ಯಾನೇಜರ್ ಕಾರ್ತಿಕ್ ಕುಮಾರ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಹೆಗ್ಡೆ ಡೈನಾಮಿಕ್ ಮಾಲಿಕರಾದ ಲಕ್ಷ್ಮೀನಾರಾಯಣ ಹೆಗ್ಡೆ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಇಲ್ಲಿ ಕೃಷಿಕರಿಗೆ ಬೇಕಾದ ಎಲ್ಲಾ ರೀತಿಯ ಯಂತ್ರೋಪಕರಣಗಳು ಒಂದೇ ಸೂರಿನಡಿ ಲಭ್ಯವಿದೆ.

ಯಾವುದೇ ಕಂಪೆನಿಯ ಎಲ್ಲಾ ರೀತಿಯ ಕೃಷಿ ಯಂತ್ರೋಪಕರಣಗಳನ್ನು ರಿಪೇರಿ ಕೂಡಾ ಮಾಡಿ ಕೊಡಲಾಗುವುದು.