ಸಿ.ಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಬುಧವಾರ ಆರು ಮಂದಿ ನಕ್ಸಲರು ಶರಣಾಗತರಾಗಿದ್ದಾರೆ. ಆದ್ರೆ ಶರಣಾದ ನಂತರ ನಕ್ಸಲರು ಎಲ್ಲಿರುತ್ತಾರೆ. ಅವರಿಗೆ ಮುಂದೆ ಎದುರಾಗುವ ಕಾನೂನು ಪ್ರಕ್ರಿಯೆಗಳು ಹೇಗಿರುತ್ತದೆ ಎನ್ನುವ ಕುತೂಹಲ ಎಲ್ಲರಿಗೂ ಇರುತ್ತದೆ ಇಲ್ಲಿದೆ ನೋಡಿ ಆ ಕುರಿತು ಸಂಪೂರ್ಣ ಮಾಹಿತಿ
ಶರಣಾದ ಬಳಿಕ
- ಶರಣಾದ ವ್ಯಕ್ತಿಯು ಸದರಿ ಸ್ಥಳದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಪೂರ್ಣ ಮಾಹಿತಿ, ನೀಡಬೇಕು.
- ಶರಣಾಗತರಾದವರು ಮಾಧ್ಯಮಗಳ ಮುಂದೆ ತಾನಾಗಿಯೇ ಸ್ವ ಇಚ್ಛೆಯಿಂದ ಶರಣಾಗುತ್ತಿರುವುದಾಗಿ ಸಾರ್ವಜನಿಕ ಹೇಳಿಕೆ ನೀಡಬೇಕು.
- ತಮ್ಮ ಜೊತೆಗಿದ್ದ ಇದೀಗ ಭೂಗತವಾಗಿರುವ ಎಲ್ಲಾ ಸದಸ್ಯರ ಹೆಸರುಗಳನ್ನು ಬಹಿರಂಗ ಪಡಿಸಬೇಕು.
- ಶರಣಾದವರು ತಮ್ಮ ಹೇಳೀಕೆಯನ್ನು ಕೆಮಾರದಲ್ಲಿ ದಾಖಲು ಮಾಡಬೇಕು.
- ಜಿಲ್ಲಾ ಶರಣಾಗತಿ ಸಮಿತಿಯು ಈ ವರದಿಯನ್ನು ರಾಜ್ಯ ಶರಣಾಗತಿ ಸಮಿತಿಗೆ ಅನುಮೋದನೆಗಾಗಿ ಕಳುಹಿಸಿಕೊಡಬೇಕು.
- ಶರಣಾಗತನಾದ ನಂತರ ಆತನಿಗೆ ಅನ್ವಯವಾಗುವಂತಹ ಶರಣಾಗತಿ ಸೌಲಭ್ಯಗಳನ್ನು ಜಿಲ್ಲಾ ಸಮಿತಿಯು ನೀಡಬೇಕು.
- ಶರಣಾಗತನಾದ ಸದಸ್ಯನ ಮೇಲೆ ಎರಡು ವರ್ಷಗಳ ಅವಧಿಯವರೆಗೆ ನಿಗಾ ಇಡಲಾಗುತ್ತದೆ.
- ಆಂತರಿಕ ಭದ್ರತಾ ವಿಭಾಗದ ಡಿವೈಎಸ್ಪಿ ಶ್ರೇಣಿಯ ಅಧಿಕಾರಿಯು ಸಂಪರ್ಕಾಧಿಕಾರಿಯಾಗಿರುತ್ತಾರೆ.
- ಈ ಸಂಪರ್ಕಾಧಿಕಾರಿಯು ಶರಣಾಗತರಾದ ವ್ಯಕ್ತಿಗಳ ಚಲನವಲನದ ಬಗ್ಗೆ ನಿಗಾವಹಿಸಿ ತಿಂಗಳಿಗೊಮ್ಮೆಯಂತೆ ಎರಡು ವರ್ಷದವರೆಗೆ ವರದಿ ಸಲ್ಲಿಸುತ್ತಾರೆ.
- ಒಂದು ಶರಣಾಗತಿ ವರದಿಯನ್ನು ತಯಾರಿಸಿ, ಜಿಲ್ಲಾ ಶರಣಾಗತಿ ಸಮಿತಿಯ ಮುಂದಿಡಬೇಕು.
ಕಾನೂನುಗಳು ಹೇಗೆ?
ಶರಣಾದವರ ಮೇಲೆ ಇರುವ ಪ್ರಕರಣಗಳ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ, ಶರಣಾಗತಿಗೆ ಇರುವ ರಾಜ್ಯ ಸಮಿತಿ ಪ್ರಕರಣಗಳನ್ನ ವಾಪಸ್ ತೆಗೆದುಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಬೇಕು.
ಇದ್ಕೆ ಸಂಪುಟದ ಅನುಮತಿ ಬೇಕಾಗುತ್ತದೆ.ಸರ್ಕಾರಿ ಅಭಿಯೋಜಕರು ಕೋರ್ಟ್ ಅರ್ಜಿ ಸಲ್ಲಿಸಬೇಕು. ಬಳಿಕ ವಾಸ್ತವವನ್ನು ಪರಿಗಣಿಸಿ ಕೋರ್ಟ್ ಪ್ರಕರಣ ವಾಪಸ್ ತೆಗೆದುಕೊಳ್ಳಲು ಅನುಮತಿ ನೀಡಿದರೆ ಪ್ರಕರಣ ಹಿಂಪಡೆಯಲಾಗುತ್ತದೆ.
ಆಗ ಪ್ರಕರಣಗಳನ್ನು ವಾಪಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ಬಳಿಕ ಕೇಂದ್ರ ನಕ್ಸಲ್ ಶರಣಾಗತಿ ಸಮತಿಯಿಂದ ಕೆಂದ್ರ ಸಚಿವ ಸಂಪುಟಕ್ಕೆ ಮನವಿ ಮಾಡಬೇಕು.
ಗೃಹ ಇಲಾಖೆ ಅದನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಕಳುಹಿಸುತ್ತದೆ. ಈ ಎಲ್ಲ ಕಡೆ ಒಪ್ಪಿಗೆ ಸಿಕ್ಕರೆ ಕೇಂದ್ರ ಸಚಿವ ಸಂಪುಟ ಪ್ರಕರಣ ವಾಪಸಾತಿಗೆ ಸಮ್ಮತಿಸಬಹುದು. ಬಳಿಕ ಕೋರ್ಟ್ ಗಮನಕ್ಕೆ ತಂದು ಕೋರ್ಟ್ನಿಂದ ಅನುಮತಿ ಪಡೆಯಬೇಕು. ಇವಿಷ್ಟು ನಕ್ಸಲರ ಶರಣಾಗತಿ ಬಳಿಕ ನಡೆಯುವ ಕಾನೂನು ಪ್ರಕ್ರಿಯೆಗಳು.