ದೈವಂ ಶರಣಂ ಗಚ್ಛಾಮಿ ತಂಡದಿಂದ ಮತ್ತೊಂದು ಥ್ರಿಲ್ಲರ್ ‘ನಂಬಿಕೆ ಮಾತಾಡಿದಾಗ’: ಯೂಟ್ಯೂಬ್ ನಲ್ಲಿ ಟ್ರೈಲರ್ ರಿಲೀಸ್

ದೈವಂ ಶರಣಂ ಗಚ್ಛಾಮಿ ತಂಡದಿಂದ ಮತ್ತೊಂದು ಥ್ರಿಲ್ಲರ್ ಚಿತ್ರ ‘ನಂಬಿಕೆ ಮಾತಾಡಿದಾಗ’ ಇದರ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಚಿತ್ರವು ಹಾರರ್ ಕಥಾ ಹಂದರದಲ್ಲಿ ಮೂಡಿಬಂದಿದೆ.

ಚಿತ್ರಕಥೆ ಮತ್ತು ನಿರ್ದೇಶನ ವಿಜಯ್ ಮಂಜುನಾಥ್ ಇವರದಾಗಿದ್ದು, ಭರ್ಗ ಸಿನಿಮಾಸ್ ಬ್ಯಾನರ್ ನಲ್ಲಿ ಸಿನಿಮಾ ಸೈಕಲ್ ಪ್ರೊಡಕ್ಷನ್ಸ್ ಪ್ರಸ್ತುತಪಡಿಸುತ್ತಿರುವ ಚಿತ್ರವನ್ನು ಹರೀಶ್ ಶೆಟ್ಟಿ ಮತ್ತು ಜೀವನ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ವಿನಯ್ ಸಹ ನಿರ್ದೇಶನದಲ್ಲಿ ಪ್ರತೀಕ್ ಶೆಟ್ಟಿ, ದೀಪಕ್ ರೈ, ಪುಷ್ಪರಾಜ್, ಪ್ರಜ್ವಲ್ ಗೌಡ, ದೀಕ್ಷಾ, ಕಿರಣ್, ಶ್ರೀನಿವಾಸ್, ಶಕ್ತಿ ರಾಜ್, ಸತೀಶ್ ಮನೋಜ್ಞ ಅಭಿನಯ ನೀಡಿದ್ದಾರೆ.

ಎನ್ ಕೆ ರಾಜ್ ಛಾಯಾಗ್ರಹಣ, ಸುಜಿತ್ ರಾಯ್ ಸಂಕಲನ, ಲೋಕಿ ತವಸ್ಯ ಸಂಗೀತ ಮತ್ತು ಗಾಯನ, ಕೂಲ್ ಮಗಾ ಸ್ಟುಡಿಯೋಸ್ ಡಿಐ ಮತ್ತು ಬಣ್ಣ ವಿಭಾಗದಲ್ಲಿ ದುಡಿದಿದ್ದಾರೆ.