ಕಾರ್ಕಳ: ಮಾ.24 ರಂದು “ನಮಗಾಗಿ ಮೋದಿ” ರಾಷ್ಟ್ರ ಜಾಗೃತಿ ಸಮಾವೇಶ

ಕಾರ್ಕಳ: ಅಭಿನವ ಭಾರತ ಕಾರ್ಕಳ ಅರ್ಪಿಸುವ “ನಮಗಾಗಿ ಮೋದಿ” ರಾಷ್ಟ್ರ ಜಾಗೃತಿ ಸಮಾವೇಶವು ಹೋಟೆಲ್ ಬಾಲಾಜಿ ಇನ್ ಬಂಡಿ ಮಠ ಇಲ್ಲಿ ಮಾ. 24 ರಂದು ಸಂಜೆ 4 ಗಂಟೆಗೆ ನಡೆಯಲಿದ್ದು, ಹಿರಿಯ ಉದ್ಯಮಿ ಪ್ರಭಾಕರ ಕಾಮತ್ ಬೋಳ ಅಧ್ಯಕ್ಷತೆ ವಹಿಸಲಿದ್ದಾರೆ.

ಯುವ ರಾಜಕೀಯ ವಿಶ್ಲೇಷಕ ಸುರಭಿ ಹೊದಿಗೆರೆ, ನಿವೃತ್ತ ವಾಯುಸೇನಾಧಿಕಾರಿ ವಿಂಗ್ ಕಮಾಂಡರ್ ಬಿ.ಎಸ್. ಸುದರ್ಶನ್, ಹಿರಿಯ ನ್ಯಾವಾದಿ ಎಂ.ಕೆ ವಿಜಯಕುಮಾರ್, ಪತ್ರಕರ್ತ ಸಂತೋಷ್ ತಮ್ಮಯ್ಯ ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ

ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ಪುಣ್ಯಭೂಮಿ ಭಾರತ ನೃತ್ಯ ಪ್ರದರ್ಶನ