ಉಡುಪಿ: ರಾಜ್ಯದಲ್ಲಿರೋದು ಮುಸಲ್ಮಾನ್ ಪ್ಲಸ್ ಮನಿ ಕಾಂಗ್ರೆಸ್ ಸರ್ಕಾರ. ಮುಸಲ್ಮಾನರಿಗೆ ಆಶ್ರಯ ಮನೆಯಲ್ಲಿ 15 ಪರ್ಸೆಂಟ್ ಮೀಸಲು. ಆದರೆ ಸಾಮಾನ್ಯರಿಗೆ ಮನೆ ಕಟ್ಟಲು ಮನಿ ಕೊಡಬೇಕು. ಇದು ರಜಾಕರಿಗಿಂತ ಕ್ರೂರ ಸರಕಾರ ಎಂದು ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಬಿ ಆರ್ ಪಾಟೀಲ್, ರಾಜು ಕಾಗೆ ಕಾಂಗ್ರೆಸ್ ವಿರುದ್ಧ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸ್ವಪಕ್ಷದ ಶಾಸಕರೇ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಕಾಮಗಾರಿಗೆ ಕಾಸು, ಹಣ ಕೊಟ್ರೆ ಮಾತ್ರ ಮನೆ ಬಗ್ಗೆ ಚರ್ಚೆಯಾಗುತ್ತಿದೆ. ಅಭಿವೃದ್ಧಿ ಆಗುತ್ತಿಲ್ಲ, ರಾಜೀನಾಮೆ ಅಂತ ಮತ್ತೊಬ್ಬ ಶಾಸಕ ಹೇಳುತ್ತಿದ್ದಾರೆ.
ಶಿವಮೊಗ್ಗದ ಶಾಸಕರು ಜಮೀರ್ ಅಹಮದ್ ರಾಜೀನಾಮೆ ಕೇಳಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದ ಕಾರ್ಯವೈಕಾರಿಯ ಬಗ್ಗೆ ಅವರ ಪಕ್ಷದಲ್ಲೇ ಆಂತರಿಕ ಅಸಮಾಧಾನ ಇದೆ. ಜೀರೋ ಪರ್ಸೆಂಟ್ ಅಭಿವೃದ್ಧಿ, 60% ಕರಪ್ಶನ್ ಸರಕಾರ ಇದು. ಸರಕಾರ ಸಂಪೂರ್ಣ ದಿವಾಳಿಯಾಗಿದ್ದು, ಇದೀಗ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನಕ್ಕೂ ಕೈ ಹಾಕಿದ್ದಾರೆ. ರಜಾಕರಂತೆ ಎಲ್ಲಾ ಕ್ಷೇತ್ರದಲ್ಲೂ ಸುಲಿಗೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕರಾವಳಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಜನಾಕ್ರೋಶ ವ್ಯಕ್ತವಾಗಿದೆ. ಎರಡು ಜಿಲ್ಲೆಯಲ್ಲಿ 40 ಸಾವಿರ ಜನ ಪಂಚಾಯತ್ ಮುಂದೆ ಪ್ರತಿಭಟಿಸಿದ್ದಾರೆ. ಜನಸಾಮಾನ್ಯರ ಐದು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟಿಸಿದ್ದೇವೆ ಎಂದರು.












