ಮುನಿಯಾಲು: ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು, ಮನೆಗಳಿಗೆ ಹಾನಿ‌ ಅಪಾರ ನಷ್ಟ

ಉಡುಪಿ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಿದ್ದು ಅಪಾರ ಹಾನಿ ಸಂಭವಿಸಿದೆ. 
ಕಾರ್ಕಳ ತಾಲೂಕಿನ ಮುನಿಯಾಲು ಭಾಗದಲ್ಲಿ ಸಂಜೆಯ ವೇಳೆಗೆ ಬೀಸಿದ ಭಾರಿ ಗಾಳಿಯಿಂದಾಗಿ ಹಲವಾರು ವಿದ್ಯುತ್ ಕಂಬಗಳು ಧರೆಗುರುಳಿವೆ. 
ಹಲವಾರು ಮನೆಗಳ ಹಂಚು, ಶೀಟ್ಗಳು ಗಾಳಿಗೆ ಹಾನಿಯಾಗಿದೆ. ಸ್ಥಳೀಯ ಕಾಲೇಜು ಕಂಪೌಂಡ್ ಹಾನಿಯಾಗಿದೆ. 
 
 
ಗಾಳಿಯಿಂದಾಗಿ ಮರಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕೆಲ ತಾಸು ರಸ್ತೆ ರಸ್ತೆ ತಡೆಯುಂಟಾಗಿದೆ. ಉಡುಪಿ ನಗರದಲ್ಲೂ‌ ಗಾಳಿ ಸಹಿತ ಉತ್ತಮ ಮಳೆಯಾಗಿದೆ.