ಮುನಿಯಾಲ್ ಆಯುರ್ವೇದ ಕಾಲೇಜು: ವನಮಹೋತ್ಸವ ಸಪ್ತಾಹ

ಉಡುಪಿ: ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲ ಇವರಿಂದ ಗುರುಪೂರ್ಣಿಮೆ ಮತ್ತು ವನಮಹೋತ್ಸವ ಸಪ್ತಾಹ ಪ್ರಯುಕ್ತ ಉಡುಪಿ ಜಿಲ್ಲೆಯ ಸಾರ್ವಜನಿಕರಿಗೆ ಉಚಿತವಾಗಿ ಉಪಯುಕ್ತ ಔಷಧೀಯ ಗಿಡಗಳ ವಿತರಣಾ ಕಾರ್ಯಕ್ರಮವನ್ನು ಜು.24 ರಂದು ಶನಿವಾರ ಹಮ್ಮಿಕೊಳ್ಳಲಾಗಿತ್ತು.

ವಿವಿಧ ಜಾತಿಯ ರೋಗನಿರೋಧಕ ಶಕ್ತಿಯುಳ್ಳ ಅಮೃತ , ನೆಲ್ಲಿಕಾಯಿ ಮತ್ತು ಲಕ್ಷ್ಮೀತರು, ಹಣ್ಣುಹಂಪಲುಗಳಾದ ಪೇರಳೆ, ನೆಲ್ಲಿ, ಪುನರ್ ಪುಳಿ ಮತ್ತು ಔಷಧೀಯ ಗಿಡಗಳಾದ ಬಿಲ್ವ, ಹೊಂಗೆ , ನೇರಳೆ, ಅಂಟುವಾಳ, ಅಶೋಕ, ರೆಂಜೆ, ಕಾಡುಬಾದಾಮಿ, ತೇಗ, ಹುಣಸೆ, ಸಂಧುಬೀಳು, ಹಿಪ್ಪಲಿ, ಕಾಳುಮೆಣಸು ಮುಂತಾದ 17 ಕ್ಕೂ ಹೆಚ್ಚು ವಿವಿಧ ಜಾತಿಗಳ ಸುಮಾರು 3000ಕ್ಕೂ ಮಿಕ್ಕಿ ಗಿಡಗಳನ್ನು 300 ಕ್ಕೂ ಅಧಿಕ ನಾಗರಿಕರಿಗೆ ಉಚಿತವಾಗಿ ವಿತರಿಸಲಾಯಿತು.