ಉಡುಪಿ: ಭಾರತ ಸರ್ಕಾರ, ವಿಶ್ವವಿದ್ಯಾನಿಲಯ ಅನುದಾನ ಆಯೋಗ ಮತ್ತು ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ಮಂಡಳಿ ಇವುಗಳ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಕರಾಮುವಿ ವಿದ್ಯಾರ್ಥಿಗಳಿಗಾಗಿ ಆರಂಭಿಸಿದೆ.
ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವು ಭಾರತ ಸರ್ಕಾರದ ಸ್ಕಿಲ್ ಇಂಡಿಯಾದ ಭಾಗವಾಗಿದ್ದು, ತರಬೇತಿಯಲ್ಲಿ ಆಡಳಿತ ಕನ್ನಡ, ಇಂಗ್ಲಿಷ್ ಫಾರ್ ಕಮ್ಯುನಿಕೇಷನ್ ಎಂಡ್ ಸಾಫ್ಟ್ ಸ್ಕಿಲ್ಸ್, ವೆಬ್ ಡಿಸೈನಿಂಗ್, ಕಂಪ್ಯೂಟರ್ ಫಂಡಮೆಂಟಲ್ಸ್, ಡೆಸ್ಕ್ಟಾಪ್ ಪಬ್ಲಿಶಿಂಗ್, ಮಲ್ಟಿಮೀಡಿಯಾ, ಬೇಸಿಕ್ ಆಫ್ ನೆಟ್ವರ್ಕಿಂಗ್ ಮುಂತಾದ ಕೋರ್ಸುಗಳಿಗೆ ಸಂಬಂಧಿಸಿದಂತೆ ಕರಾಮುವಿ ಕಲಿಕಾರ್ಥಿ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಕರಾಮುವಿ ಕಲಿಕಾರ್ಥಿ ಕೇಂದ್ರವಾದ ಎಂ,ಜಿ,ಎಂ, ಕಾಲೇಜಿನಲ್ಲಿ ಪ್ರಥಮ ವರ್ಷದ UG (B.A./B.COM/B.Lib.I.Sc) ವಿದ್ಯಾರ್ಥಿಗಳಿಗೆ ಜೂನ್ 23 ರಂದು ಮತ್ತು PG (M.A/M.COM/M.Sc/MBA/B.Ed) ವಿದ್ಯಾರ್ಥಿಗಳಿಗೆ ಜೂನ್ 30 ರಂದು ನಡೆಸಲು ಉದ್ದೇಶಿಸಲಾಗಿದೆ.
ತರಬೇತಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ಅಂದೇ ವಿತರಿಸಲಾಗುವುದು. ಉಡುಪಿ, ಕರಾವಾರ ಮತ್ತು ಮಂಗಳೂರು ವ್ಯಾಪ್ತಿಯ ಕರಾಮುವಿ ವಿದ್ಯಾರ್ಥಿಗಳು ತಪ್ಪದೇ ಕಡ್ಡಾಯವಾಗಿ ಹಾಜರಾಗುವಂತೆ ಕರಾಮುವಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಕೆ.ಪಿ. ಮಹಾಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












