ಕಾರ್ಕಳ:ಕಾಬೆಟ್ಟು ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಮುದ್ದುಕೃಷ್ಣ ಸ್ಪರ್ಧೆ ಉದ್ಘಾಟನೆ

ಕಾರ್ಕಳ: ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನ ಚೋಲ್ಪಾಡಿ ಕಾಬೆಟ್ಟು ಕಾರ್ಕಳ ,ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆನೆಕೆರೆ ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆ-2020 ಸೆ.10 ರಂದು ಕಾಬೆಟ್ಟು ವೇಣುಗೋಪಾಲ ದೇವಸ್ಥಾನದಲ್ಲಿ ಜರಗಿತು‌.

ಕಾರ್ಯಕ್ರಮಕ್ಕೆ ದೇವಸ್ಥಾನದ ಸಾವಿತ್ರಿ ಉಪಾಧ್ಯಾಯ ,ಸಂಕೇತ್ ಉಪಾದ್ಯಾಯ,ಸಂದೇಶ್ ಉಪಾದ್ಯಾಯ,ಸಂತೋಷ್ ಉಪಾದ್ಯಾಯ, ಜಿ.ಸಮಿತಿಯ ಅಧ್ಯಕ್ಷ ದಿನೇಶ್ ಪ್ರಭು,ಕಾರ್ಯದರ್ಶಿ ಸುದೇಶ್ ಶೆಟ್ಟಿಗಾರ್,ಉಪಾದ್ಯಕ್ಷ ಕೇಸರಿ ಹೆಗ್ಡೆ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪರವಾಗಿ ವರದರಾಯ ಪ್ರಭು ಉಪಸ್ಥಿತರಿದ್ದರು.ಶೋಭಾ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.

ಚಿನ್ನಾಟವಾಡಿದ ಮುದ್ದುಕೃಷ್ಣರು:
ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಪುಟ್ಟ-ಪುಟಾಣಿಯರು ಭಾಗವಹಿಸಿ ವೇದಿಕೆಯಲ್ಲಿ ಚಿನ್ನಾಟವಾಡಿದರು.ಚಿಣ್ಣರ ಮೊಗದಲ್ಲಿ ಸಂಭ್ರಮ ತುಳುಕಾಡುತ್ತಿತ್ತು.

ಕಾರ್ಯಕ್ರಮವನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ನಡೆಸಲಾಯಿತು.ಕೊರೊನಾದ ನಡುವೆಯೂ ಕಾರ್ಯಕ್ರಮಕ್ಕೆ ಉತ್ತರ ಪ್ರತಿಕ್ರಿಯೆ ವ್ಯಕ್ತವಾಯಿತು