ಮಾತೃ ಛಾಯಾ ಶಿಶು ಮಂದಿರದ ವತಿಯಿಂದ ಮುದ್ದು ಕೃಷ್ಣ ಸ್ಪರ್ಧೆ

ಪಿತ್ರೋಡಿ: ಉದ್ಯಾವರದ ಮಾತೃ ಮಂಡಲಿಯ ಅಂಗಸಂಸ್ಥೆ ಮಾತೃ ಛಾಯಾ ಶಿಶು ಮಂದಿರ ವತಿಯಿಂದ ಮುದ್ದು ಕೃಷ್ಣ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತೃ ಮಂಡಲಿ ಟ್ರಸ್ಟಿಗಳಾದ ನಯನಾ ಗಣೇಶ್, ಸುಮತಿ ಯು ಮೈಂದನ್ , ಬೇಬಿ ಟಿ.ಬಂಗೇರ,ಮಾತೃ ಛಾಯಾ ಶಿಶು ಮಂದಿರದ ಅಧ್ಯಕ್ಷೆ ಗುಲಾಬಿ ಡಿ.ಸನಿಲ್, ಪ್ರೇಮ ಶಿವದಾಸ್, ಚಂದ್ರಾವತಿ ಭಾಸ್ಕರ್, ಸಬಿತ ಮೈಂದನ್,ಕುಸುಮ ವಿಶ್ವನಾಥ್,ಮಮತಾ, ವಿನುತಾ ಹಾಗೂ ಮಾತಾಜಿ ಯಮುನಾ ಉಪಸ್ಥಿತರಿದ್ದರು.