ಕೆಸಿಇಟಿ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿ ಅಕ್ಷಯ್ ಎಂ.ಹೆಗ್ಡೆ ರಾಜ್ಯಕ್ಕೆ ಪ್ರಥಮ ರ‍್ಯಾಂಕ್: ಕರ್ನಾಟಕ ಸಿ.ಇ.ಟಿ.-2025ರಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಅದ್ಭುತ ಸಾಧನೆ

ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-2025ರಲ್ಲಿ ಮತ್ತೊಮ್ಮೆ ಶ್ರೇಷ್ಠ ಸಾಧನೆಯನ್ನು ಮೆರೆದಿದ್ದಾರೆ.

ಅಕ್ಷಯ್ ಎಂ. ಹೆಗ್ಡೆ ಕೆಸಿಇಟಿ-ಕೃಷಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ. ಈ ಅಸಾಧಾರಣ ಸಾಧನೆಯ ಜೊತೆಗೆ ಆಳ್ವಾಸ್‌ನ ಇತರ ವಿದ್ಯಾರ್ಥಿಗಳು ಸಹ ಉನ್ನತ ರ‍್ಯಾಂಕ್‌ಗಳನ್ನು ಪಡೆದಿದ್ದು, ವರ್ಷದಿಂದ ವರ್ಷಕ್ಕೆ ಅತ್ಯುತ್ತಮ ಸಿಇಟಿ ಫಲಿತಾಂಶವನ್ನು ಮುಂದುವರಿಸಿದ್ದಾರೆ.

ರಾಜ್ಯದ ಮೊದಲ 10 ರ‍್ಯಾಂಕ್‌ಗಳಲ್ಲಿ 02 ರ‍್ಯಾಂಕ್, ಮೊದಲ 50 ರ‍್ಯಾಂಕ್‌ಗಳಲ್ಲಿ 12 ರ‍್ಯಾಂಕ್, ಮೊದಲ 100 ರ‍್ಯಾಂಕ್‌ಗಳಲ್ಲಿ 24 ರ‍್ಯಾಂಕ್, ಮೊದಲ 200 ರ‍್ಯಾಂಕ್‌ಗಳಲ್ಲಿ 52 ರ‍್ಯಾಂಕ್, ಮೊದಲ 500 ರ‍್ಯಾಂಕ್‌ಗಳಲ್ಲಿ 172 ರ‍್ಯಾಂಕ್, ಮೊದಲ 1,000 ರ‍್ಯಾಂಕ್‌ಗಳಲ್ಲಿ 506 ರ‍್ಯಾಂಕ್‌ಗಳನ್ನು ಪಡೆದುಕೊಂಡಿರುತ್ತಾರೆ.

ಪಿಸಿಬಿಯಲ್ಲಿ 3 ವಿದ್ಯಾರ್ಥಿಗಳು 180ರಲ್ಲಿ 170ಕ್ಕೂ ಅಧಿಕ ಅಂಕ, 49 ವಿದ್ಯಾರ್ಥಿಗಳು 160ಕ್ಕೂ ಅಧಿಕ, 146 ವಿದ್ಯಾರ್ಥಿಗಳು 150ಕ್ಕೂ ಅಧಿಕ, 851 ವಿದ್ಯಾರ್ಥಿಗಳು 121ಕ್ಕೂ ಅಧಿಕ, 1359 ವಿದ್ಯಾರ್ಥಿಗಳು 100ಕ್ಕೂ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದಾರೆ. ಪಿಸಿಎಮ್‌ನಲ್ಲಿ ಒಬ್ಬ ವಿದ್ಯಾರ್ಥಿ 180ರಲ್ಲಿ 170ಕ್ಕೂ ಅಧಿಕ ಅಂಕ, 5 ವಿದ್ಯಾರ್ಥಿಗಳು 160ಕ್ಕೂ ಅಧಿಕ, 34 ವಿದ್ಯಾರ್ಥಿಗಳು 150ಕ್ಕೂ ಅಧಿಕ, 489 ವಿದ್ಯಾರ್ಥಿಗಳು 120ಕ್ಕೂ ಅಧಿಕ, 971 ವಿದ್ಯಾರ್ಥಿಗಳು 100ಕ್ಕೂ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದಾರೆ.

ಅಕ್ಷಯ್ ಎಂ. ಹೆಗ್ಡೆ ಕೃಷಿಯಲ್ಲಿ 1ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 11ನೇ ರ‍್ಯಾಂಕ್, ಪಶುವೈದ್ಯಕೀಯದಲ್ಲಿ 12ನೇ ರ‍್ಯಾಂಕ್, ನರ್ಸಿಂಗ್‌ನಲ್ಲಿ 12ನೇ ರ‍್ಯಾಂಕ್, ಇಂಜಿನಿಯರಿAಗ್‌ನಲ್ಲಿ 29ನೇ ರ‍್ಯಾಂಕ್, ಬಿ. ಫಾರ್ಮ ಹಾಗೂ ಡಿ.ಫಾರ್ಮನಲ್ಲಿ 34ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ವೈಭವ್ ಎಂ. ಕೃಷಿಯಲ್ಲಿ 23ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 61ನೇ ರ‍್ಯಾಂಕ್, ಪಶುವೈದ್ಯಕೀಯದಲ್ಲಿ 85ನೇ ರ‍್ಯಾಂಕ್, ನರ್ಸಿಂಗ್‌ನಲ್ಲಿ 86ನೇ ರ‍್ಯಾಂಕ್, ಬಿ. ಫಾರ್ಮ ಹಾಗೂ ಡಿ.ಫಾರ್ಮನಲ್ಲಿ 115ನೇ ರ‍್ಯಾಂಕ್, ಇಂಜಿನಿಯರಿಂಗ್‌ನಲ್ಲಿ 163ನೇ ರ‍್ಯಾಂಕ್, ವಿಜೇತ್ ಜಿ. ಗೌಡ ಕೃಷಿಯಲ್ಲಿ 34ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 124ನೇ ರ‍್ಯಾಂಕ್, ರಾಜಾ ಯದುವಂಶಿ ಕೃಷಿಯಲ್ಲಿ 46ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 132ನೇ ರ‍್ಯಾಂಕ್, ತುಷಾರ್ ಘನಶ್ಯಾಮ್ ಪಟೇಲ್ ಕೃಷಿಯಲ್ಲಿ 56ನೇ ರ‍್ಯಾಂಕ್, ಪಶುವೈದ್ಯಕೀಯದಲ್ಲಿ 70ನೇ ರ‍್ಯಾಂಕ್, ನರ್ಸಿಂಗ್‌ನಲ್ಲಿ 70ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 96ನೇ ರ‍್ಯಾಂಕ್, ಬಿ. ಫಾರ್ಮ ಹಾಗೂ ಡಿ.ಫಾರ್ಮನಲ್ಲಿ 125ನೇ ರ‍್ಯಾಂಕ್, ಚೈತನ್ಯ ಕೃಷಿಯಲ್ಲಿ 62ನೇ ರ‍್ಯಾಂಕ್, ಜಷ್ವಂತ್ ಸಿ. ಕೃಷಿಯಲ್ಲಿ 67ನೇ ರ‍್ಯಾಂಕ್, ಸಾಗರಿಕಾ ಎಂ.ಆರ್. ಕೃಷಿಯಲ್ಲಿ(ಪ್ರಾ) 17ನೇ ರ‍್ಯಾಂಕ್, ತುಷಾರ್ ಉಡುಪ ಕೃಷಿಯಲ್ಲಿ 97ನೇ ರ‍್ಯಾಂಕ್, ಅಕ್ಷಯ್ ಆರ್. ತಾಸಿಲ್ದಾರ್ ಪಶುವೈದ್ಯಕೀಯದಲ್ಲಿ 6ನೇ ರ‍್ಯಾಂಕ್, ಕೃಷಿಯಲ್ಲಿ(ಪ್ರಾ) 17ನೇ ರ‍್ಯಾಂಕ್, ಅವಿಸ್ ಹಸನ್ ಅಸಿಫಲಿ ಮುಜಾವರ್ ಕೃಷಿಯಲ್ಲಿ 95ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 183ನೇ ರ‍್ಯಾಂಕ್, ಯಶವಂತ್ ಬನ್ನಾಡ್ ಕೃಷಿಯಲ್ಲಿ 108ನೇ ರ‍್ಯಾಂಕ್, ರಾಘವೇಂದ್ರ ಶಂಕರ್ ಸುನ್ನಾಳ್ ಕೃಷಿಯಲ್ಲಿ 109ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 150ನೇ ರ‍್ಯಾಂಕ್, ಪಶುವೈದ್ಯಕೀಯದಲ್ಲಿ 176ನೇ ರ‍್ಯಾಂಕ್, ನರ್ಸಿಂಗ್‌ನಲ್ಲಿ 177ನೇ ರ‍್ಯಾಂಕ್, ಮನೋಗ್ನ ಎನ್. ಕೃಷಿಯಲ್ಲಿ 118ನೇ ರ‍್ಯಾಂಕ್, ಅರುಣ್ ಗೌಡ ಪಾಟೀಲ್ ಕೃಷಿಯಲ್ಲಿ 124ನೇ ರ‍್ಯಾಂಕ್, ಪ್ರಣಾಮ್ ಎನ್. ಶೆಟ್ಟಿ ಕೃಷಿಯಲ್ಲಿ 120ನೇ ರ‍್ಯಾಂಕ್, ಭೀಮನಗೌಡ ಪಾಟೀಲ್ ಪಶುವೈದ್ಯಕೀಯ (ಪ್ರಾ)ದಲ್ಲಿ 121ನೇ ರ‍್ಯಾಂಕ್, ಗಣೇಶ್ ರಾಜು ಕರ್ಕಿ ಕೃಷಿಯಲ್ಲಿ 129ನೇ ರ‍್ಯಾಂಕ್, ವಿಶ್ರುತ್ ಎಸ್. ಪಶುವೈದ್ಯಕೀಯ(ಪ್ರಾ)ದಲ್ಲಿ 130ನೇ ರ‍್ಯಾಂಕ್, ಹರ್ಷ್ ಕಾಡೆ ಕೃಷಿಯಲ್ಲಿ 133ನೇ ರ‍್ಯಾಂಕ್, ಕುಸುಮಾ ರೆಡ್ಡಿ ಟಿ.ಎಮ್. ಪಶುವೈದ್ಯಕೀಯ(ಪ್ರಾ)ದಲ್ಲಿ 131ನೇ ರ‍್ಯಾಂಕ್, ಸಿದ್ಧು ರಾಜ್ ಎನ್.ಬಿ. ಕೃಷಿಯಲ್ಲಿ 135ನೇ ರ‍್ಯಾಂಕ್, ಅಕ್ಷಯ್. ಎಂ. ಪಶುವೈದ್ಯಕೀಯದಲ್ಲಿ 164ನೇ ರ‍್ಯಾಂಕ್, ನರ್ಸಿಂಗ್‌ನಲ್ಲಿ 165ನೇ ರ‍್ಯಾಂಕ್, ಧನುಷ್ ಗೌಡ ಸಿ.ಎಸ್. ಕೃಷಿಯಲ್ಲಿ 188ನೇ ರ‍್ಯಾಂಕ್, ಮದಗೊಂಡ್ ತುಕಾರಾಮ್ ನ್ಯಾಚುರೋಪತಿಯಲ್ಲಿ 192ನೇ ರ‍್ಯಾಂಕ್, ಮೋಹಿತ್ ಡಿ. ಗೌಡ ಕೆ. ಕೃಷಿಯಲ್ಲಿ 195ನೇ ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಪ್ರಾಂಶುಪಾಲ ಪ್ರೊ. ಎಮ್. ಸದಾಕತ್ ಇದ್ದರು.