ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮಹೇಶ್ ದೇವಾಡಿಗ ಕ್ಲಿಕ್ಕಿಸಿದ ಸ್ಪೆಷಲ್ ಚಿತ್ರ

ಮಹೇಶ್ ದೇವಾಡಿಗ ಉಡುಪಿ ಜಿಲ್ಲೆಯ ಅಡ್ವೆ ನಿವಾಸಿ. ಪ್ರಸ್ತುತ ಕಾಂಜರ ಕಟ್ಟೆಯಲ್ಲಿ “ಸ್ಮೈಲ್ ಫೋಟೋಗ್ರಫಿ”ಎನ್ನುವ ಸ್ಟುಡಿಯೋ ನಡೆಸಿ, ವೃತ್ತಿಪರ ಛಾಯಾಗ್ರಹಣದಲ್ಲಿ ತೊಡಗಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮೂಡೆ ಎನ್ನುವ ವಿಶೇಷ ಖಾದ್ಯ ಮಾಡುತ್ತಾರೆ. ಮೂಡೆ ಮಾಡಲು ಎಲೆಗಳನ್ನು  ವಿಶೇಷವಾಗಿ ಹೆಣೆದು ಅದರಲ್ಲಿ ಹಿಟ್ಟು ಮಾಡಿ ಬೇಯಿಸಿ ದೇವರಿಗೆ ನೈವೇದ್ಯಯಿಡುವ  ಸಂಪ್ರದಾಯ ಗ್ರಾಮೀಣ ಭಾಗದಲ್ಲಿ ಈಗಲೂ ಚಾಲ್ತಿಯಲ್ಲಿದೆ ಈ ಚಂದದ ದೃಶ್ಯವನ್ನು ಮಹೇಶ್ ಸೆರೆ ಹಿಡಿದಿದ್ದಾರೆ.

ಮಹೇಶ್ ದೇವಾಡಿಗ:9844674895